ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಆಶಿಶ್ ಕೆ.ವೈ. ಕಬಡ್ಡಿಯ ವಿದ್ಯಾರ್ಥಿಯಾಗಿ ಆಯ್ಕೆ

0

ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ದಾರವಾಡಕ್ಕೆ ಕೋಟೆಬಾಗಿಲಿನ ಆಶಿಶ್ ಕೆ.ವೈ ಆಯ್ಕೆಯಾಗಿರುತ್ತಾರೆ. ಕಬಡ್ಡಿಯಲ್ಲಿ ಇವರ ಪ್ರದರ್ಶನ ಹಾಗೂ ಸಾಧನೆ ಗುರುತಿಸಿ ಇವರ ಆಯ್ಕೆ ನಡೆದಿರುತ್ತದೆ.

ಇವರು ಮಂಗಳೂರಿನ ಶಕ್ತಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ತಾಲೂಕು ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರಿಗೆ ಕಿರಣ್ ಆರಂಪಾಡಿ ಹಾಗು ಮನೋಹರ್ ಸವಣೂರುರವರು ತರಬೇತುದಾರರಾಗಿದ್ದರು. ಬಿಳಿನೆಲೆ ಗ್ರಾಮದ ಕೋಟೆ ಬಾಗಿಲು ನಿವಾಸಿ, ಸುಬ್ರಹ್ಮಣ್ಯ ಠಾಣೆಯ ಹಡೆ ಕಾನ್ಸ್ ಟೇಬಲ್ ಸಂಧ್ಯಾ ಮಣಿ ಯೋಗೀಶ್ ಕುಮಾರ್ ಪುತ್ರರಾಗಿರುತ್ತಾರೆ.