ಸುಳ್ಯ ದಸರಾ ಉತ್ಸವದ ಜಮಾ ಖರ್ಚಿನ ಲೆಕ್ಕ ಪತ್ರ ಮಂಡನಾ ಸಭೆ

0

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ಜರುಗಿದ 52 ನೇ ವರ್ಷದ ಸುಳ್ಯ ದಸರಾ ಉತ್ಸವದ ಜಮಾ ಖರ್ಚಿನ ಲೆಕ್ಕ ಪತ್ರ ಮಂಡನಾ ಸಭೆಯು ಸಮಿತಿಯ ಗೌರವಾಧ್ಯಕ್ಷ
ಗೋಕುಲ್ ದಾಸ್ ರವರ ಅಧ್ಯಕ್ಷತೆಯಲ್ಲಿ ಎ.10 ರಂದು ಕಾನತ್ತಿಲ ದುಗ್ಗಮ್ಮ ದೇರಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2023-24 ನೇ ಸಾಲಿನ ಉತ್ಸವದ ಅಯ- ವ್ಯಯಗಳ ಬಗ್ಗೆ ವಿವರವನ್ನು ಸಭೆಗೆ ಮಂಡಿಸಲಾಯಿತು. ಸಮಿತಿಯಪದಾಧಿಕಾರಿಗಳಾದ ನಾರಾಯಣ ಕೇಕಡ್ಕ, ಬೂಡು ರಾಧಾಕೃಷ್ಣ ರೈ, ನವೀನ್ ಚಂದ್ರ ಬೆಂಗಳೂರು, ರವಿಚಂದ್ರ ಕೊಡಿಯಾಲಬೈಲು, ಪದ್ಮನಾಭ,ಪುರುಷೋತ್ತಮ, ಸತೀಶ್, ರಾಜು ಪಂಡಿತ್, ದೀಪಕ್ ಸುಳ್ಯ, ಚಂದ್ರಶೇಖರ
ಪಂಡಿತ್, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.