ಬಾಳುಗೋಡಿನ ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ಬಾಳುಗೋಡಿನ ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವ ಹಾಗೂ ಸಹ ಪರಿವಾರಗಳ ವಾರ್ಷಿಕ ನೇಮೋತ್ಸವ ಮೇ. 2ರಂದು ನಡೆಯಿತು.

ಶ್ರೀ ಶಿರಾಡಿ ದೈವ,
ಪರಿವಾರ ದೈವಗಳಾದ ಬ್ರಹ್ಮರು, ನುಗ್ಗ ಮದಿಮಾಳ್, ಮಣಿ ಗೋವಿಂದ, ಗಿಳಿರಾಮ,
ಪೊಟ್ಟ, ಪೊರಾಂದಾಯ, ಪುರುಷ, ಕರಿನಾಯಕ, ಬೇಡವ, ಬಚ್ಚನಾಯಕ, ಮಣಿಪಂತ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ
ಅಡಿಮಂತಾಯ ಹಾಗೂ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವವು ಜರುಗಿತು.

ಮೇ. 1 ರ ಸಂಜೆ ಬೆಟ್ಟುಮಕ್ಕಿಯಲ್ಲಿ ಗ್ರಾಮಸ್ಥರು ಸೇರಿ ಭಂಡಾರ ಹಿಡಿದು ಶಿರಾಡಿ ಬದಿ ಕಂಚಾರಕ್ಕೆ ಹೋಗುವುದು. ತಂಬಿಲಾದಿ ಸೇವೆ ನಡೆಯಿತು. ಮೇ. 2ರ ಬೆಳಗ್ಗೆ ಗಂಟೆ ನೇಮ ಪ್ರಾರಂಭ ಆಗಿ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಗಡಿಗೆ ಹೋಗುವ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಹಲವು ಪರಿವಾರ ದೈವಗಳ ನೇಮೋತ್ಸವ ಜರುಗಿತು. ಸಮಿತಿಯ
ಗೌರವಾಧ್ಯಕ್ಷ ಅಂಬಾದಾಸ್ ಗೌಡ, ಅಧ್ಯಕ್ಷರಾದ ವಸಂತ ಗೌಡ ಕಿರಿಭಾಗ, ಕಾರ್ಯದರ್ಶಿ ಲೊಕೇಶ್ ಕಟ್ಟೆಮನೆ, ಖಜಾಂಜಿ ವಸಂತ ಮುಚ್ಚಾರ, ಉಪ ಕಾರ್ಯದರ್ಶಿ ಅಜೇಯ ಪಿ, ಗೌರವ ಸಲಹೆಗಾರರು, ಆಡಳಿತ ಮಂಡಳಿ ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ದೈವಗಳ ಪೂಜಾರಿಗಳು ಕಾರ್ಯಕ್ರಮ ಯಶಸ್ವಿಗೆ ದುಡಿದರು.