ದಕ್ಷಿಣ ಬೀರಮಂಗಲದ ಬಳಿ ರಸ್ತೆ ಕೆಸರುಮಯ, ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ

0

ಸುಳ್ಯ ದಕ್ಷಿಣ ಬೀರಮಂಗಲ ಚರ್ಚಿನ ಹಿಂಬದಿಯ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಇಂದು ಬೆಳಿಗ್ಗೆಯಿಂದ 3, 4 ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೀರಿನ ಪೈಪ್ ಅಳವಡಿಸಿ ಮುಚ್ಚಿರುವ ಕಣಿಯ ಮೇಲ್ಭಾಗದ ಮಣ್ಣುಗಳು ಮಳೆ ನೀರಿಗೆ ಕೊಚ್ಚಿ ಹೋಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಎಂದು ಸ್ಥಳಿಯರು ಸುದ್ದಿಗೆ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಬೆಳ್ಳಿಯಪ್ಪ ಗೌಡರವರು ಶ್ರಮದಾನದ ಮೂಲಕ ರಸ್ತೆಯ ಮೇಲಿನಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದು ಅವರ ಈ ಕಾರ್ಯಕ್ಕೆ ಸ್ಥಳೀಯರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಆದರೂ ಕೂಡ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಬೇಕಾಗಿದೆ.