ಪೈಲಾರಿನಲ್ಲಿ ಸಂಜೀವಿನಿ ಘಟಕದ ವತಿಯಿಂದ ಹಾಳೆ ತಟ್ಟೆ ತಯಾರಿಕಾ ಘಟಕದ ಉದ್ಘಾಟನೆ

0

ಅಮರಮುಡ್ನೂರು ಗ್ರಾಮದ ಪೈಲಾರು
ಶ್ರೀ ವಿಷ್ಣು ಸಂಜೀವಿನಿ ಮಹಿಳಾ ಒಕ್ಕೂಟ, ಪೃಥ್ವಿ ರೈತ ಉತ್ಪಾದಕರ ಗುಂಪು ಕುಕ್ಕಜಡ್ಕ ಇದರ ಸಹಯೊಗದಲ್ಲಿ ಪೈಲಾರಿನಲ್ಲಿರುವ ಸಂಜೀವಿನಿ ಘಟಕದಲ್ಲಿ ನೂತನ ಹಾಳೆತಟ್ಟೆ ತಯಾರಿಕಾ ಘಟಕದ ಉದ್ಘಾಟನೆಯು ಮೇ.13 ರಂದು ನೆರವೇರಿತು.

ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ಘಟಕವನ್ನು ಉದ್ಘಾಟಿಸಿದರು. ಎನ್.ಆರ್.ಎಲ್.ಎಂ. ಬ್ಲಾಕ್ ಮ್ಯಾನೇಜರ್ ಶ್ರೀಮತಿ ಮೇರಿ, ವಲಯ ಮೇಲ್ವಿಚಾರಕ ಅವಿನಾಶ್, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಒಕ್ಕೂಟದ ಅಧ್ಯಕ್ಷ ಶ್ರೀಮತಿ ಸುಮ.ಬಿ, ಕಾರ್ಯದರ್ಶಿ
ಯಶೋದ ರವರು ಉಪಸ್ಥಿತರಿದ್ದರು.

ರೈತ ಉತ್ಪಾದಕ ಸಂಘದ ಅಧ್ಯಕ್ಷರು ,ಕಾರ್ಯದರ್ಶಿ ಹಾಗೂ ಸದಸ್ಯರು ಭಾಗವಹಿಸಿದರು.
ಸಂಜೀವಿನಿ ಒಕ್ಕೂಟದ ಕೃಷಿ ಉದ್ಯೋಗ ಸಖಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು.
ಎಂಬಿ.ಕೆ ಮತ್ತು ಎಲ್.ಸಿ.ಆರ್.ಪಿ ಯವರು ಸಹಕರಿಸಿದರು..