ಮೇ.27 ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬಂಡಿ ರಥ ಸಮರ್ಪಣೆ, ಮೇ.20 ಕ್ಕೆ ಆಗಮನ

0

ಅಮೇರಿಕಾದಲ್ಲಿ ಉದ್ಯಮಿಯಾದ ಸಾಯಿ ಶ್ರೀನಿವಾಸ್ ರ ಕೊಡುಗೆ

ಪತ್ರಿಕಾಗೋಷ್ಠಿಯಲ್ಲಿ ಮೋಹನ್ ದಾಸ್ ರೈ ಮಾಹಿತಿ

ಆಂದ್ರಪ್ರದೇಶದವರಾಗಿದ್ದು ಅಮೇರಿಕಾದಲ್ಲಿ ಉದ್ಯಮಿಯಾದ ಸಾಯಿ ಶ್ರೀನಿವಾಸ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂಡಿ ರಥವನ್ನು ದೇಣಿಗೆಯಾಗಿ ನೀಡಲಿದ್ದು ಅದನ್ನು ಮೇ.20 ರಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತರಲಾಗುವುದು ಎಂದು ಮೋಹನ್ ದಾಸ್ ರೈ ಅವರು ಮಾಹಿತಿ ನೀಡಿದರು. ಅವರು ಸುಬ್ರಹ್ಮಣ್ಯದಲ್ಲಿ ಮೇ.18 ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಬಂಡಿ ರಥವು
ಸುಮಾರು ಹದಿನಾರು (16ft) ಎತ್ತರವಿದ್ದು ಸಾಗುವಾಣಿ, ಹೆಬ್ಬಳಸು, ಚಿಪು೯ ಈ ಮೂರು ಮರಗಳಿಂದ ನಿರ್ಮಿಸಲಾಗಿದೆ. ಇದು ಸುಮಾರು 12.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಇದನ್ನು ಕೋಟೇಶ್ವರ ಶಿಲ್ಪಿಗಳಾದ ರಾಜಗೋಪಲ ಆಚಾರ್ಯ ರವರ ನೇತೃತ್ವದಲ್ಲಿ ಕೆತ್ತನೆ ಕೆಲಸವನ್ನು ಮಾಡಿ ಪೂರ್ಣ ಗೊಂಡಿರುತ್ತದೆ. ಮೇ.20 ರ ಸಂಜೆ 3ಗಂಟೆ ಹೊತ್ತಿಗೆ ಸುಬ್ರಹ್ಮಣ್ಯ ತಲುಪಲಿದ್ದು, ಮೇ.27 ಕ್ಕೆ ರಥ ಸಮರ್ಪಣೆ ‌ನಡೆಯಲಿದೆ ಎಂದು ತಿಳಿಸಿದರು.

ಬಂಡಿ ರಥ ತರವ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಆಡಳಿತಧಿಕಾರಿ, ದೇವಸ್ಥಾನದ ಸಿಬ್ಬಂದಿ ವರ್ಗದವರು, ಊರಿನ ಮತ್ತು ಪರಊರಿನ ಭಕ್ತರು ಸೇರಿ ನೂತನ ಬಂಡಿ ರಥವನ್ನು ಸ್ವಾಗತಿಸಬೇಕಾಗಿ ಬಂಡಿರಥದ ದಾನಿಗಳ ಆತ್ಮೀಯರಾದ ಮೋಹನ್ ದಾಸ್ ರೈ ಯವರು ಪತ್ರಿಕಾ ಗೋಷ್ಠಿಯಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು ಹಾಗೂ ಪವನ್ ಎಂ.ಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾದವ ದೇವರಗದ್ದೆ, ವಿಮಲಾ ರಂಗಯ್ಯ ಉಪಸ್ಥಿತರಿದ್ದರು.