ಅರಂತೋಡು: ಉಳುವಾರು ದಿ.ಯು.ಕೆ. ಬಾಳಪ್ಪ ಗೌಡ ಪೆತ್ತಾಜೆ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ

0

ಅರಂತೋಡು ಗ್ರಾಮದ ಉಳುವಾರು ದಿ. ಯು.ಕೆ. ಬಾಳಪ್ಪ ಗೌಡರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಮೇ.29ರಂದು ಜರುಗಿತು.

ಸುಳ್ಯ ತಾಲೂಕು ರೈತ ಸಂಘದ ಉಪಾಧ್ಯಕ್ಷ ತೀರ್ಥರಾಮ ಪರ್ಣೋಜಿ ಅವರು ದಿ. ಬಾಳಪ್ಪ ಗೌಡರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಿ. ಬಾಳಪ್ಪ ಗೌಡರ ಪತ್ನಿ ಲಕ್ಷ್ಮಿ ಯು.ಬಿ., ಪುತ್ರ ನಾಗೇಶ್, ಪುತ್ರಿ ಶ್ರೀಮತಿ ಜಯಂತಿ, ಸೊಸೆ ಶ್ರೀಮತಿ ಸೌಮ್ಯ, ಅಳಿಯ ಶಂಕರ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.