ಆರಂತೋಡು : ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಶಾಲಾ ಪ್ರಾರಂಭೋತ್ಸವ

0

ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 2024-25 ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ನಡೆಯಿತು.

ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸ್ಕೌಟ್ ಬ್ಯಾoಡ್ ಘೋಷದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಂಚಾಲಕ ಕೆ.ಆರ್ ಗಂಗಾಧರ್ ರವರು ಮತ್ತು ಮುಖ್ಯ ಶಿಕ್ಷಕರು ಹಾಗೂ ಸಿಬಂದಿಗಳು ಪುಷ್ಪ ನೀಡಿ ಸ್ವಾಗತಿಸಿದರು.

ಪೋಷಕರ ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಕೆ ಆರ್ ಗಂಗಾಧರ್ ಉದ್ಘಾಟಿಸಿ “ಇಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಯ” ಕುರಿತು ಹಿತವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಎಂ ಕೆ ಸೀತಾರಾಮರವರು ವಹಿಸಿದ್ದರು.

ಶಿಕ್ಷಕ ಕಿಶೋರ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಪೋಷಕ ಪ್ರತಿನಿಧಿ ಪಿ.ಗೋಪಾಲ ಕೃಷ್ಣ ಹಾಗೂ ಶ್ರೀಮತಿ ವಿಮಲಾಕ್ಷಿಯವರು ಹಾಗೂ ಎಲ್ಲಾ ಬೋಧಕ ಸಿಬಂದಿಗಳು ಉಪಸ್ಥಿತರಿದ್ದರು.