ವಿಧಾನಪರಿಷತ್ ಚುನಾವಣೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎಂ. ವೆಂಕಪ್ಪ ಗೌಡರಿಂದ ಮತಯಾಚನೆ

0

ಸುಳ್ಯದ ನ್ಯಾಯವಾದಿ, ಪುತ್ತೂರು ವಿಧಾನಸಭಾ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಉಸ್ತುವಾರಿ ಎಂ ವೆಂಕಪ್ಪಗೌಡರವರು ಇಂದು ಪುತ್ತೂರು ಭಾಗದಲ್ಲಿ
ವಿಧಾನ ಪರಿಷತ್ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಎಂ ಮಂಜುನಾಥ್ ರವರ ಪರವಾಗಿ ಮತಯಾಚನೆ ನಡೆಸಿದರು.

ಫಿಲೋಮಿನಾ ಪ್ರೌಢಶಾಲೆ, ರಾಮಕೃಷ್ಣ ಪ್ರೌಢಶಾಲೆ,ಎಂ ಪಿ ಎಂ ಪ್ರೌಢಶಾಲೆ,ಮೌಂಟೇನ್ ವ್ಯೂ ,ಹಾಗು ಸುದಾನ ಪ್ರೌಢಶಾಲೆಗಳಿಗೆ ಭೇಟಿ ನೀಡಿ ನೈಋತ್ಯ ಪದವೀಧರ ಹಾಗು ಶಿಕ್ಶಕ ಕ್ಷೆತ್ರದ ಅಭ್ಯರ್ಥಿ ಪರವಾಗಿ ಮತ ಯಾಚಿಸಿದರು.


ಈ ಸಂಧರ್ಭದಲ್ಲಿ ಕೆಪಿಸಿಸಿ ಸಂಯೊಜಕರಾದ ಕಾವು ಹೇಮನಾಥ ಶೆಟ್ಟಿ,ಪೂಡ ಅಧ್ಯಕ್ಷ ಭಾಸ್ಕರ ಗೌಡ ,ಕರ್ಣಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ,ಹಾಗು ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ NK ಜಗನ್ ನಿವಾಸ್ ರಾವ್ ಉಪಸ್ಥಿತರಿದ್ದರು .ಈ ಸಂಧರ್ಭದಲ್ಲಿ ಚುಣಾವಣೆ ಬಗ್ಗೆ ಮತ ಚಲಾಯಿಸುವ ವಿವರವನ್ನು ನೀಡುವುದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಬೇಕೆಂಬುದಾಗಿ ವೆಂಕಪ್ಪ ಗೌಡ ರವರು ವಿನಂತಿಸಿದರು.