ಬಡ್ಡಡ್ಕ ರಾಮಕೃಷ್ಣ ಅನುದಾನಿತ ಶಾಲೆಯ ಶಿಕ್ಷಕ ಮಾರುತಿ ಬಸ್ಯಾ ನಾಯ್ಕರ್ ನಿವೃತ್ತಿ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ಬಸ್ಯಾನಾಯ್ಕರ್ ರವರು ಮೇ.31 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ದಿ.ಹನುಮಂತಪ್ಪ ಮತ್ತು ದಿ.ಸೀತಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ತನ್ನ ವಿದ್ಯಾಭ್ಯಾಸ ವನ್ನು ಹುಟ್ಟೂರಿನಲ್ಲಿ ಪೂರೈಸಿ 02.9.1996 ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡರು.


ಬಳ್ಳಾರಿಯಲ್ಲಿ ಶಿಕ್ಷಕ ತರಬೇತಿ ಪಡೆದ ಬಳಿಕ ಆಲೆಟ್ಟಿಯ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಪ್ರಾಥಮಿಕ ಶಾಲೆಗೆಸೇರ್ಪಡೆಗೊಂಡಿರುತ್ತಾರೆ.

ಸುದೀರ್ಘ 28 ವರ್ಷಗಳ ಕಾಲ ಬಡ್ಡಡ್ಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ‌.

ಪ್ರಸ್ತುತ ಬಡ್ಡಡ್ಕದಲ್ಲಿ ಪತ್ನಿ ಶ್ರೀಮತಿ ಮಂಜುಳಾ ಮಾರುತಿ ಬಸ್ಯಾ ನಾಯ್ಕರ್, ಪುತ್ರ ಸಂತೋಷ್ ಸುಳ್ಯದ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜ್ ಹಳೆ ವಿದ್ಯಾರ್ಥಿ, ಪುತ್ರಿ ಶ್ರೀಮತಿ ಸಿತಾರ ಸುಳ್ಯದ ಕೊಡಿಯಾಲಬೈಲು ಎಂ.ಜಿ.ಎಂ.ಶಾಲೆಯ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ.