ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಅವರಿಗೆ ಬೀಳ್ಕೊಡುಗೆ

0

ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಜ್ಯಮಟ್ಟದ ಹಿಂದಿ ರತ್ನ ಪ್ರಶಸ್ತಿ ,ಕೊಡಗು ಜಿಲ್ಲಾ ಮಟ್ಟದಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀಮತಿ ಕಾಮಾಕ್ಷಿ ಪಿ.ಎಸ್. ಅವರು ಮೇ.31ರಂದು ನಿವೃತ್ತಿ ಹೊಂದಿದ್ದು, ಅವರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮೇ.31ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲೆಗೆ ನಿರಂತರ ಶೇಕಡಾ ನೂರು ಫಲಿತಾಂಶದ ಜೊತೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಇನ್ನಿತರ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೇರೇಪಿಸಿ ಮಾರ್ಗದರ್ಶನವನ್ನು ನೀಡಿ ಯಶಸ್ವಿಯಾಗಿರುವುದಕ್ಕೆ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಎಸ್. ಡಿ..ಎಂ..ಸಿ..ಸದಸ್ಯರುಗಳಾದ ಹೊಸೂರು ಚಂದ್ರಶೇಖರ್, ಹೊಸೂರು ಗೋಪಾಲಕೃಷ್ಣ, ಸೂರಜ್ ಹೊಸೂರು, ಆನಂದ ತಾಮ್ರಕಟ್ಟೆ,ಸುಮಿತ್ರಾ ನಿಡಿಂಜಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯಮುನಾ ಉಪಸ್ಥಿತರಿದ್ದರು.


ಸಹಶಿಕ್ಷಕ ರಂಜಿತ್ ಕೆ. ಯು.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು,ಶಿಕ್ಷಕ ವೃಂದ,ಸಿಬ್ಬಂದಿ ವರ್ಗ ಮತ್ತು ಪೋಷಕರು ಉಪಸ್ಥಿತರಿದ್ದರು.