ಪಂಬೆತ್ತಾಡಿ: ಭಾರಿ ಗಾಳಿ ಮಳೆ- ಧರೆಗೆ ಉರುಳಿದ ನೂರಾರು ಅಡಿಕೆ ಮರಗಳು-ಮನೆಗೆ ಹಾನಿ

0

ಭಾರಿ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮದಲ್ಲಿ ಅಪಾರ ಹಾನಿ ಸಂಭವಿಸಿದ ಘಟನೆ ಜೂ.3 ರಂದು ವರದಿಯಾಗಿದೆ.

ಜೂ.3 ರಂದು ಸಂಜೆ ವೇಳೆಗೆ ಪಂಬೆತ್ತಾಡಿ ಪರಿಸರದಲ್ಲಿ ಬೀಸಿದ ಭಾರಿ ಗಾಳಿ ಮಳೆಗೆ ತೆಂಗಿನ ಮರ, ನೂರಾರು ಅಡಿಕೆ ಮರಗಳು, ಇತರ ಮರಗಳು ಉರುಳಿದ್ದು ಅಪಾರ ಹಾನಿಯಾಗಿದೆ.


ಪಂಬೆತ್ತಾಡಿ ಗ್ರಾಮದ ರವಿಪ್ರಸಾದ್ ನೆಕ್ರಕಜೆ, ಗಣೇಶ್ ಜೋಯಿಸ, ವೆಂಕಟ್ರಮಣ ಭಟ್ ಕಂರ್ಬಿ, ಜೀನತ್, ಸುಬ್ರಾಯ ಭಟ್ ಮೊದಲಾದವರ ಕೃಷಿ ತೋಟದಲ್ಲಿ ತೆಂಗಿನ ಮರ ಸೇರಿದಂತೆ ನೂರಾರು ಅಡಿಕೆ ಮರಗಳು ಧರೆಗೆ ಉರುಳಿದ್ದು ಅಪಾರ ನಷ್ಟ ಸಂಭವಿಸಿದೆ.

ಮರವೊಂದು ಉರುಳಿ ಬಿದ್ದು ಅದರ ರೆಂಬೆ ರವಿಪ್ರಸಾದ ರವರ ಮನೆ ಒಂದು ಬದಿಗೆ ಬಡಿದಿದ್ದು ಮನೆ ಮಾಡಿಗೆ ಹಾನಿಯಾಗಿದೆ. ಕೋಟೆಗುಡ್ಡೆ ಅಂಗನವಾಡಿ ಕಟ್ಟಡದ ಮೇಲೆ ಮರ ರೆಂಬೆ ಮುರಿದು ಬಿದ್ದಿದೆ. ಅನೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಅಪಾರ ಹಾನಿಯಾಗಿದೆ.