ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ

0


ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ಗಿಡವೊಂದನ್ನು ನೆಡುವುದರ ಮುಲಕ ಪರಿಸರದ ಪ್ರಾಮುಖ್ಯತೆಯನ್ನು ವೇದ್ಯಗೊಳಿಸಿದರು.ಆಯಿಷತ್ ಶಿಬ ನಿರೂಪಣೆ ಮಾಡಿದರು.

ಮನಸ್ವಿ ಮತ್ತು ಅವರ ತಂಡ ಸಾಮೂಹಿಕ ಪರಿಸರಗೀತೆ ಹಾಡಿದರು. ಸಂದೇಶ್ ತಾನೇ ರಚಿಸಿದ ಪರಿಸರ ಗೀತೆಯನ್ನು ಸಂಯೋಜಿಸಿ ಹಾಡಿದರು. ಸಾನಿಕ ರೈ ಹಾಡೊಂದನ್ನು ಹಾಡಿದರೆ ಸಮೀಕ್ಷಾ ಗೌಡ ವಿಶ್ವ ಪರಿಸರ ದಿನದ ಪ್ರಾಮುಖ್ಯತೆ ತಿಳಿಸಿದರು. ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.