ಬೇಂಗಮಲೆ : ಮೋರಿಗೆ ಗುದ್ದಿದ ಸ್ಕೂಟಿ – ಸವಾರನಿಗೆ ಗಾಯ – ಆಸ್ಪತ್ರೆಗೆ ದಾಖಲು

0

ಬೇಂಗಮಲೆಯಲ್ಲಿ ಸ್ಕೂಟಿಯೊಂದು ಮೋರಿಗೆ ಗುದ್ದಿ ಸವಾರ ಗಾಯಗೊಂಡ ಘಟನೆ ಜೂ.10 ರಂದು ನಡೆದಿದೆ.


ಕರುಣಾಕರ ಕಟ್ಟತ್ತಾರು ಎಂಬವರು ಸುಳ್ಯದಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿರುವಾಗ ಬೇಂಗಮಲೆಯಲ್ಲಿ ರಸ್ತೆ ಬದಿಯ ಮೋರಿಗೆ ಗುದ್ದಿ ರಸ್ತೆಗೆ ಬಿದ್ದಿದ್ದು ಕೈ,ಕಾಲು,ಮುಖಕ್ಕೆ ಗಾಯಗೊಂಡ ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಕೆವಿಜಿ ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.