ಸುಬ್ರಹ್ಮಣ್ಯ : ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಷ್ಯವೇತನ ವಿತರಣೆ

0
                  ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏನೆಕಲ್ ಸರಕಾರಿ ಪ್ರೌಢಶಾಲೆಯ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ಐದು ಮಂದಿ ವಿದ್ಯಾರ್ಥಿಗಳಿಗೆ ಜೂ.22 ರಂದು  ಶಿಷ್ಯವೇತನವನ್ನು ವಿತರಿಸಲಾಯಿತು.  


                        ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ಎ ಎ ತಿಲಕ್ ಹಾಗೂ ನಿರ್ದೇಶಕಿ ಶ್ರೀಮತಿ ಗಾಯತ್ರಿ ತಿಲಕ್ ಶಿಷ್ಯವೇತನವನ್ನು ವಿದ್ಯಾರ್ಥಿಗಳಾದ ಅಂಜಲಿ ಬಿ, ಅಜಯ ಕೆ ಸಿ, ರಿಜಿತ್ ,ಶ್ರಾವ್ಯ, ಹಾಗೂ ಚಂದ್ರಕಲಾ ಆರ್ ಅವರಿಗೆ ನೀಡಿದರು .ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್ ರವರು ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಅನ್ನಪೂರ್ಣ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.  . ಶಿಕ್ಷಕರುಗಳಾದ ಗಾಯತ್ರಿ ಬಿ ಶಾರದಾ ಕೆ. ದೀಪ ಕಟಾರೆ ,ಅತಿಥಿ ಶಿಕ್ಷಕ ಶ್ರೀಕಾಂತ್, ಪ್ರಥಮ ದರ್ಜೆ ಸಹಾಯಕಿ ಜಯಶ್ರೀ ಹಾಜರಿದ್ದರು. ಸಭೆಯಲ್ಲಿ ಟ್ರಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸಲಾಯಿತು.