ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ‘ಪಂಜದಲ್ಲಿ ನೃತ್ಯ ತರಗತಿ ಪ್ರಾರಂಭ

0

ಕಲಾ ಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಇದರ ವತಿಯಿಂದ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನೃತ್ಯ ತರಗತಿ ಉದ್ಘಾಟನೆ ಗೊಂಡಿತು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿ “ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಪೂರಕವಾದ ನೃತ್ಯ ತರಬೇತಿ ತರಗತಿಯಿಂದ ಮಕ್ಕಳಿಗೆ ಪ್ರಯೋಜನವಾಗಲಿ”ಎಂದರು .

ಸಭಾಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿದ್ದರು. ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ, ವನಿತಾ ಸಮಾಜ (ರಿ) ಪಂಜ ಇದರ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಕಾನತ್ತೂರ್, ಹಾಗೂ ಕಲಾ ಮಂದಿರ್ ಬೆಳ್ಳಾರೆ ಸಂಸ್ಥೆಯ ನೃತ್ಯ ನಿರ್ದೇಶಕ ಪ್ರಮೋದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಸಂಸ್ಥೆಯ ನಿರ್ದೇಶಕರುಗಳಾದ ಅಶೋಕ್ ಬಸ್ತಿಗುಡ್ಡೆ, ಸತೀಶ್ ಪಂಜ, ಹಾಗೂ ನೃತ್ಯ ಶಿಕ್ಷಕಿಯರಾದ ಕುಮಾರಿ ಭಾಗ್ಯಶ್ರೀ, ಕುಮಾರಿ ನಿಶ್ಮಿತಾ, ಕುಮಾರಿ ವಿಕ್ಯ, ಯಕ್ಷಿತ್ ಉಪಸ್ಥಿತರಿದ್ದರು

ನಿರ್ದೇಶಕ ಪ್ರಮೋದ್ ರೈ ಸ್ವಾಗತಿಸಿ, ಸತೀಶ್ ಪಂಜ ವಂದಿಸಿ, ಜೇಸಿ ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು. .