ಜು.15: ಸುಳ್ಯದಲ್ಲಿ ಮಾನಸ ಗಂಗಾ ಸಹಕಾರ ಸಂಘದ 5 ನೇ ಶಾಖೆಯ ಉದ್ಘಾಟನಾ ಸಮಾರಂಭ

0

ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಡ್ಕಾರ್ ಆರ್ಕೇಡ್ ನಲ್ಲಿ ಮಾನಸ ಗಂಗಾ ಸಹಕಾರ ಸಂಘದ 5 ನೇ ಶಾಖೆಯು ಜು.15 ರಂದು ಉದ್ಘಾಟನೆ ಗೊಳ್ಳಲಿರುವುದು.

ಸಮಾರಂಭದ ಅಧ್ಯಕ್ಷತೆಯನ್ನು ಮಾನಸ ಗಂಗಾ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ಕೆ.ವಿ ಯವರು ವಹಿಸಲಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಶಾಖೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘದ ಉಪನಿಬಂಧಕ ಹೆಚ್.ಎನ್.ರಮೇಶ್, ಎ.ಒ.ಎಲ್.ಇ.ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರೊ.ಕೆ.ಸೀತಾರಾಮ ರೈ ಸವಣೂರು, ಸುಳ್ಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅಡ್ಕಾರ್ ಆರ್ಕೇಡ್ ಮಾಲಕ ದಿನೇಶ್ ಅಡ್ಕಾರ್ ಉಪಸ್ಥಿತರಿರಲಿದ್ದಾರೆ.

ಕಳೆದ 7 ವರ್ಷಗಳಿಂದ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣ ಪುತ್ತೂರಿನಲ್ಲಿ ಸಹಕಾರ ಸಂಘವುಕಾರ್ಯಾಚರಿಸುತ್ತಿದ್ದು 5 ನೇ ಶಾಖೆಯನ್ನು ಸುಳ್ಯದಲ್ಲಿ ಇದೀಗ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಉಪ್ಪಿನಂಗಡಿ, ಈಶ್ವರಮಂಗಲ, ಎಂ.ಜೆ.ಎಸ್.ಆಗ್ರೋ ದರ್ಬೆ ಪುತ್ತೂರು ಶಾಖೆಯನ್ನು ಹೊಂದಿದೆ.
11 ಮಂದಿ ನಿರ್ದೇಶಕರನ್ನು ಹೊಂದಿರುವ
ಆಡಳಿತ ಮಂಡಳಿಯು‌ ಸಂಘದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಘದ ಪಿ.ಆರ್.ಒ. ನಿವೃತ್ತ ಗ್ರಾಮಕರಣಿಕ ಕೇರ್ಪಳ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದರು.