ಸುಬ್ರಹ್ಮಣ್ಯ ಪೊಲೀಸರಿಂದ ಬ್ಯಾಟರಿ ಕಳ್ಳನ ಹಾಗೂ ವಾಹನ ವಶ

0

ಸುಬ್ರಹ್ಮಣ್ಯದ ಮೆಸ್ಕಾಂ ಶಾಖೆಯಲ್ಲಿ ಮಾ.1 ರಂದು ಕಳ್ಳತನವಾಗಿದ್ದ ಬ್ಯಾಟರಿ ಕಳ್ಳನನ್ನು ಹಿಡಿಯುವಲ್ಲಿ ಸುಬ್ರಹ್ಮಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಬ್ರಹ್ಮಣ್ಯ ಮೆಸ್ಕಾಂ ನಿಂದ ಒಟ್ಟು 8 ಬ್ಯಾಟರಿ ಕಳ್ಳತನ ವಾಗಿತ್ತು. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿ ವೆಂಕಟೇಶ್ ಎಂಬಾತನನ್ನು ಈ ಹಿಂದೆಯೇ ಬಂದಿಸಿ ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು.


ಇನ್ನೊಬ್ಬ ಆರೋಪಿಯಾದ ಮುತ್ತು ಮಣಿ ಎಂಬಾತನನ್ನು ಮಂಗಳೂರಿನಲ್ಲಿ ಇತ್ತೀಚೆಗೆ ಅರೆಸ್ಟ್ ಮಾಡಲಾಗಿದ್ದು ಆತನಿಂದ ಕೃತ್ಯಕ್ಕೆ ಬಳಕೆಯಾದ KA19AC 7392 ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿಟ್ಲ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ತನ್ನ ಕೈ ಚಳಕ ತೋರಿಸಿದ್ದಾರೆ.


ಆರೋಪಿ ಪತ್ತೆಯಲ್ಲಿ ಇನ್ಸ್ಪೆಕ್ಟರ್ ಸತೀಶ್ ಹಾಗೂ ಸುಬ್ರಮಣ್ಯ ಠಾಣಾ ಎಸ್ ಐ -ಕಾರ್ತಿಕ್ , ಎಸ್ .ಐ ಮಹೇಶ ಪಿ ಹಾಗೂ ಅಪರಾಧ ಸಿಬ್ಬಂದಿಯಾದ ಮಹೇಶ್ ಹಾಗೂ ಆಕಾಶ್ ರವರು ಪ್ರಮುಖ ಪಾತ್ರವಹಿಸಿರುತ್ತಾರೆ. ಎ ಎಸ್ ಐ ಕರುಣಾಕರ, ಹೆಡ್ ಕಾನ್ಸ್‌ಟೇಬಲ್ ಸಂಧ್ಯಾ, ವಿಠಲ್ ರವರು ಪೂರಕವಾಗಿ ಕಾರ್ಯ ನಿರ್ವಹಿಸಿರುತ್ತಾರೆ.