ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ನೋಂಡರಿಗೆ ಶ್ರದ್ಧಾಂಜಲಿ ಸಭೆ

0

ಜೂ. 29ರಂದು ನಿಧನರಾದ ಬಳ್ಪ ಗ್ರಾಮದ ಪಾದೆ ಬಳಿ ವಾಸವಾಗಿದ್ದು, ಬಳಿಕ ಬೆಟ್ಟಂಪಾಡಿಯಲ್ಲಿ ನೆಲೆಸಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ನೋಂಡರಿಗೆ ಶ್ರದ್ಧಾಂಜಲಿ ಸಭೆ ಜು. 12ರಂದು ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ನಡೆಯಿತು.

ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಪಂಜ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸುಬ್ರಹ್ಮಣ್ಯ ಕುಳ ನುಡಿನಮನಗಳನ್ನು ಸಲ್ಲಿಸಿದರು.


ಮೃತರು ಪತ್ನಿ ಶ್ರೀಮತಿ ಗುಲಾಬಿ, ಪುತ್ರರಾದ ಶಿರ್ವ ಸೈಂಟ್ ಮೆರಿಸ್ ವಿದ್ಯಾಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೇಣುಗೋಪಾಲ ನೋಂಡ, ಪುತ್ರಿಯರಾದ ನಿವೃತ್ತ ಉಪನ್ಯಾಸಕಿ ಶ್ರೀಮತಿ ವಿಜಯ ನೋಂಡ, ಶ್ರೀಮತಿ ವಿದ್ಯಾ ನೋಂಡ, ಶ್ರೀಮತಿ ವಿಮಲಾ ರಂಗಯ್ಯ ಸೇರಿದಂತೆ ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.