ಗೌಡರ ಯುವ ಸೇವಾ ಸಂಘದ ನಗರ ಘಟಕದ ಸಭೆ

0


ಗೌಡರ ಯುವ ಸೇವಾ ಸಂಘ ಸುಳ್ಯ ಇದರ ನಗರ ಘಟಕದ ಸಭೆಯು ಇಂದು ಸುಳ್ಯದ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ವಹಿಸಿದ್ದರು. ವೇದಿಕೆಯಲ್ಲಿ ನಗರ ಘಟಕದ ಅಧ್ಯಕ್ಷ ಐ.ಬಿ.ಚಂದ್ರಶೇಖರ್, ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಗೌಡರ ಯುವಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷರಾದ ಚಂದ್ರ ಕೋಲ್ಚಾರ್, ಎಂಜಿಎಂ ಶಾಲೆಯ ಸಂಚಾಲಕ ದೊಡ್ಡಣ್ಣ ಬರೆಮೇಲು, ನಗರ ಉಸ್ತುವಾರಿ ಡಾ.ಲೀಲಾಧರ್ ಡಿ.ವಿ.,ಯುವ ಸೇವಾ ಸಂಘದ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೀಲಾ ಕುರುಂಜಿ, ಶ್ರೀಮತಿ ಕುಸುಮಾ ಕೊಳಂಜಿರೋಡಿ, ತರುಣ ಘಟಕದ ಅಧ್ಯಕ್ಷ ರಜತ್ ಅಡ್ಕಾರ್ ಉಪಸ್ಥಿತರಿದ್ದರು.


ಜುಲೈ 27 ರಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ, ಆ.4 ರಂದು ಆಟಿ ಉತ್ಸವ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಮತ್ತು ಮಹಿಳಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ನೂತನ ಅಧ್ಯಕ್ಷರಾಗಿ ರಾಕೇಶ್ ಕುಂಟಿಕಾನ,ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕುಂತಿನಡ್ಕ, ಉಪಾಧ್ಯಕ್ಷರುಗಳಾಗಿ ಶಶಿಧರ ಎಂ. ಜೆ. ಕೊಯಿಕುಳಿ, ಶಿವರಾಮ ಕೇರ್ಪಳ, ಬಾಲಗೋಪಾಲ ಎಂ.,ಶೀನಪ್ಪ ಕಾಯರ್ತೋಡಿ, ಗಂಗಾಧರ ಕುರುಂಜಿ,ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಕುಂಚಡ್ಕ, ಭಾಗೀಶ್ ಕೆ. ಟಿ., ನಿರ್ದೇಶಕರುಗಳಾಗಿ ರಾಮಚಂದ್ರ ಪೆಲ್ತಡ್ಕ, ಗಿರಿಧರ ಕಂದಡ್ಕ, ಜಯಪ್ರಕಾಶ್ ಕಲ್ಲುಗದ್ದೆ, ರಂಜಿತ್ ನೆಡಿಲು, ಸತೀಶ್ ಚಂದ್ರ ಡಿ. ಎಚ್., ಕಿರಣ್ ನೀರ್ಪಾಡಿ,ಸುನಿಲ್ ಕೇರ್ಪಳ, ಅವಿನಾಶ್ ಕುರುಂಜಿ, ಸುರೇಶ್ ಕುರುಂಜಿ, ಗೌರವ ಸಲಹೆಗಾರರಾಗಿ ಮಾಧವ ಗೌಡ ಮಡಪ್ಪಾಡಿ, ಜನಾರ್ದನ ಕೊಳೆಂಜಿ ರೋಡಿ,ಚಂದ್ರಶೇಖರ ಮೋಂಟಡ್ಕ, ಡಿ.ಎಸ್, ಗಿರೀಶ್, ಸುಂದರ ಗೌಡ ರಾಮಕಜೆ, ಕೆ.ಟಿ. ವಿಶ್ವನಾಥ, ನಗರ ಉಸ್ತುವಾರಿಯಾಗಿ ಡಾ‌.ಲೀಲಾಧರ್ ಡಿ.ವಿ.ಯವರನ್ನು ಆಯ್ಕೆ ಮಾಡಲಾಯಿತು.


ಮಹಿಳಾ ಘಟಕದ ಅಧ್ಯಕ್ಷರಾಗಿ ಹರ್ಷ ಕರುಣಾಕರ ಸೇರ್ಕಜೆ, ಗೌರವಾಧ್ಯಕ್ಷರಾಗಿ ಹೇಮಲತ ದೇಂಗೋಡಿ, ನಿಕಟಪೂರ್ವಾಧ್ಯಕ್ಷರಾಗಿ ಶೀಲಾ ಅರುಣ ಕುರುಂಜಿ, ಉಪಾಧ್ಯಕ್ಷರುಗಳಾಗಿ ಚಂದ್ರಮತಿ, ಮೀನಾಕ್ಷಿ ಸುಂದರ ರಾಮಕಜೆ, ಉಷಾ ಪೇರಾಲು, ಕಾರ್ಯದರ್ಶಿ ಸುಜಾತ ಕುರುಂಜಿ, ಜತೆ ಕಾರ್ಯದರ್ಶಿ ಪವಿತ್ರ ಕುರುಂಜಿ, ನಿರ್ದೇಶಕರುಗಳಾಗಿ ಲತಾ ಪ್ರಸಾದ್ ಕುದ್ಪಾಜೆ, ಜಲಜಾಕ್ಷಿ ಚೆನ್ನಪ್ಪ, ಶೇಷಮ್ಮ, ಶೀತಲ್, ಪ್ರೇಮಾ ದೊಡ್ಡಣ್ಣ ಬರೆಮೇಲು,ಕುಸುಮ ಕೊಳಂಜಿರೋಡಿ, ರೇಖಾ ಪದ್ಮಯ್ಯ, ಹೇಮಾ ವೇಣುಗೋಪಾಲ, ಲತಾ ಸದಾನಂದ ಕೋಲ್ಚಾರು, ಪೂಜಾಶ್ರೀ ವಿತೇಶ್ ಕೋಡಿ,ಉಷಾ ಕಾನತ್ತಿಲ, ದೇವಕಿ ಬಿ, ಕುಸುಮ ಮೊಂಟಡ್ಕ ,ಗೀತಾ ಗಣಪತಿ ಬಿರಮಂಗಲ ,ಪ್ರೀತಿಕಾ ಚೆಮ್ನೂರು, ನವ್ಯ ದಿನೇಶ್ ,ಪ್ರಿಯಾ ಸದಾನಂದ ,ದೀಪಿಕಾ ಮಕ್ಕಟ್ಟಿ ,ಶೋಭಾ ಕಿರ್ಲಾಯ, ವಿಜೇತ ಮಂಜುನಾಥ ಸುಳ್ಯ , ಸರೋಜಿನಿ ಪೆಲ್ತಡ್ಕ ಆಯ್ಕೆಯಾದರು.