ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಕ್ಲಸ್ಟರ್ ವತಿಯಿಂದ ಮಾದಕ ವ್ಯಸನದ ವಿರುದ್ದ ಜನ ಸಂಚಲನ ಕಾರ್ಯಕ್ರಮ

0

ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಕ್ಲಸ್ಟರ್ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮ ಬೆಳ್ಳಾರೆ ZJM ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆಯಿತು.
ಬೆಳ್ಳಾರೆ ಜುಮಾ ಮಸೀದಿಯ ಖತೀಬ್ ನಸೀಹ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.
ಕ್ಲಸ್ಟರ್ ಅಧ್ಯಕ್ಷ ಜಮಾಲ್ ಚೆನ್ನಾರ್ ಅಧ್ಯಕ್ಷತೆ ವಹಿಸಿದರು
SKSSF ಸುಳ್ಯ ವಲಯ ನಾಯಕ ಅಕ್ಬರ್ ಕರಾವಳಿ ಮುಖ್ಯ ಪ್ರಭಾಷಣ ನಡೆಸಿದರು.


SKSSF ರಾಜ್ಯ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ, SKSSF ಜಿಲ್ಲಾ ಕಾರ್ಯದರ್ಶಿ ಯಾಸಿರ್ ಅರಫಾತ್ ಕೌಸರಿ, ಲತೀಫ್ ಹನೀಫಿ ಕಳಂಜ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾತ್ ಅದ್ಯಕ್ಷರಾದ ಯು ಹೆಚ್ ಅಬೂಬಕರ್ ಮಂಗಳ. ಜಿಲ್ಲಾ, ಮದ್ರಸ ಮೆನೇಜ್ಮೇಂಟ್ ಕೋಶಾಧಿಕಾರಿಯಾದ ಖಾದರ್ ಹಾಜಿ ಭಯಂಬಾಡಿ, ಅನಿವಾಸಿ ಉದ್ಯಮಿ ಹಮೀದ್ ನೆಟ್ಟಾರ್ ಮೊದಲಾದವರು ಉಪಸ್ಥಿತರಿದ್ದರು.
SKSSF ಜಿಲ್ಲಾ ಉಪಾಧ್ಯಕ್ಷ ಕೆ ಎಸ್ ಜಮಾಲ್ ಸ್ವಾಗತಿಸಿ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮುನೀಝ್ ನೆಟ್ಟಾರ್ ಧನ್ಯವಾದಗೈದರು.