ಸೂಡ ಮತ್ತು ಮಹಾಯೋಜನೆಗಳಿಂದ ಜನರಿಗೆ ತೊಂದರೆ-ಶಾಸಕರು ಅಧಿವೇಶನದಲ್ಲಿ ಮಾತನಾಡಲಿ

0


ಸುಳ್ಯ ನಗರ ವ್ಯಾಪ್ತಿಯಲ್ಲಿ ಮಹಾಯೋಜನೆ ಜಾರಿಯಾಗಿದ್ದು, ಈಗ ಸೂಡಾ ಕೂಡಾ ಜಾರಿಯಾಗಿರುವುದರಿಂದ ಜನರಿಗೆ ತೊಂದರೆಯಾಗಿದೆ. ಜನರ ಕೋರಿಕೆಯಂತೆ ನಗರ ಪಂಚಾಯತ್‌ನಿಂದ ಕೊಡುವ ಅಧಿಕೃತ ಖಾತೆಯಿಂದ ಹಣಕಾಸಿನ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಸೂಡಾದ ನಿಯಮದಂತೆ ಸೂಡಾದಿಂದಲೇ ಅಧಿಕೃತ ಖಾತೆ ನೀಡಬೇಕು. ಸೂಡಾದಿಂದ ಹಣಕಾಸು ವ್ಯವಹಾರ ಹೊಸದಾಗಿ ಮನೆ ನಿರ್ಮಾಣ ಕಟ್ಟಡ ಕಟ್ಟಲು, ನಿವೇಶನ ಮಾರಾಟ, ಖರೀದಿ ಮಾಡಲು ಅನುಮತಿ ಕೊಡದೆ ಇದ್ದು ತೀವ್ರ ಸಮಸ್ಯೆ ಉಂಟಾಗಿದೆ ಇದರಿಂದ ಬಡ ಜನರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಈ ಯೋಜನೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ನಮ್ಮ ಶಾಸಕರು ಜನರ ಸಮಸ್ಯೆಯನ್ನು ಅರಿತು ಕೂಡಲೇ ಸರ್ಕಾರದ ಗಮನಕ್ಕೆ ತಂದು ಈ ಯೋಜನೆಯನ್ನು ಬದಲಾವಣೆ ಮಾಡಬೇಕು ಈಗ ನಡೆಯುವ ಅಧಿವೇಶನದಲ್ಲಿ ಮಾತನಾಡಬೇಕು.ಶಾಸಕರು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಜನಸಾಮಾನ್ಯರ ತೊಂದರೆಗೆ ಮುಕ್ತಿ ನೀಡಬೇಕು ಎಂದು ಕೋರುತ್ತೇವೆ ಎಂದು ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿ ಮಾಡಿದ್ದಾರೆ.