ಆರ್ತಾಜೆ ಪರಿಸರದ ವಿದ್ಯುತ್ ಸಮಸ್ಯೆ ಸರಿಪಡಿಸಿಕೊಡುವಂತೆ ಸ್ಥಳೀಯರಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ

0

ಕಳೆದ ಕೆಲವು ದಿನಗಳಿಂದ ಜಾಲ್ಸೂರು ಗ್ರಾಮದ ಆರ್ತಾಜೆ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಸರಿ ಪಡಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಜು. 21 ರಂದು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.


ಅವರು ನೀಡಿರುವ ಮನವಿಯಲ್ಲಿ ‘ಸುಳ್ಯ ತಾಲೂಕು ಜಾಲ್ಲೂರು ಪೈಚಾರು-ಸೋಣಂಗೇರಿ ಮದ್ಯೆ ಆರ್ತಾಜೆ ಎಂಬಲ್ಲಿ ಅಡ್ಡ ರಸ್ತೆಯಲ್ಲಿ ಹೆಚ್ಚು ಮನೆಗಳಿದ್ದು ಸುಮಾರು 3 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದೇ ಇದ್ದು,ಹಾಗೂ ದಿನ ಪ್ರತಿ ಲೋವೋಸ್ಟೇಜ್ ಸಮಸ್ಯೆಯಿಂದ ತೊಂದರೆಯಾಗುತ್ತದೆ. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದರು ತಾತ್ಕಾಲಿಕವಾಗಿ ಬಂದು ಸರಿಪಡಿಸುತ್ತಿದ್ದರು. ಅದರೇ ಮತ್ತೆ ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ 3 ಪಿ ಸಿ ಲೈನ್ ಅಳವಡಿಕೆ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆ ಒದಗಿಸಿ ಕೊಡಬೇಕೆಂದು ಉಲ್ಲೆಖಿಸಿದ್ದಾರೆ.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಆರ್ತಾಜೆ,
ಸ್ಥಳೀಯರಾದ ತಿರುಮಲೇಶ್ವರ,ನಾಸಿರ್ ಕೆ.ಪಿ,ಪ್ರವೀಣ್ ನಡುಬೆಟ್ಟು ಉಮ್ಮರ್,ಬಶೀರ್ ಕೆ.ಪಿ
ಮಜೀದ್ ಆರ್ತಾಜೆ ಉಪಸ್ಥಿತರಿದ್ದರು.