ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆರ್.ಕೆ.ನಾಯರ್ ರಿಂದ ದತ್ತಿನಿಧಿ ಹಾಗೂ ಕೊಡೆ ವಿತರಣೆ

0

ಸುಳ್ಯಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರೀನ್ ಹೀರೋ ಆಫ್ ಇಂಡಿಯಾ2023 ರ ಪ್ರಶಸ್ತಿ ಪಡೆದ ಆರ್.ಕೆ.ನಾಯರ್ ರವರು ವರ್ಷಂಪ್ರತಿ ಕೊಡ ಮಾಡಲ್ಪಡುವ ಕೊಡೆ ಹಾಗೂ ಪೆನ್ಸಿಲ್ ಬಾಕ್ಸ್ ಹಾಗೂ ದತ್ತಿನಿಧಿಯನ್ನು ಜು.22 ರಂದು ವಿತರಿಸಲಾಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷ ರವಿರಾಜ ಕಮಿಲಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ.ವಿ.ಶೆಟ್ಟಿ, ಹಿರಿಯ ವಿದ್ಯಾರ್ಥಿ ಗೋಕುಲದಾಸ್ , ತಮಿಳು ಸಂಘದ ಸ್ಥಾಪಕಾಧ್ಯಕ್ಷಪೆರುಮಾಳ್, ಕಾರ್ಯದರ್ಶಿ ಕಾರ್ತಿಕ್, ದೇವರಾಜ್ ಕುದ್ಪಾಜೆ, ಹಿರಿಯವಿದ್ಯಾರ್ಥಿಸಂಘದ ಸಂಚಾಲಕ ಆರ್. ಕೆ. ಭಟ್, ಶಾಲಾ ಮುಖ್ಯಶಿಕ್ಷಕಿ ಸುನಂದಾ ಶೆಟ್ಟಿ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಸುನಂದಾ ಶೆಟ್ಟಿ ಸ್ವಾಗತಿಸಿದರು,ಶಿಕ್ಷಕಿ ಶ್ರೀಮತಿ ಶೀಲಾವತಿ ದತ್ತಿನಿಧಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಚಂದ್ರಶೇಖರ ವಂದಿಸಿದರು.
ಶಿಕ್ಷಕಿ ಕು| ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರೇಮಾವತಿ ಮತ್ತು ಹೇಮಲತಾ ಸಹಕರಿಸಿದರು.