ಸುಳ್ಯ : ವಿಕಲಚೇತನರಿಗೆ ಹೊಸ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಕ್ಯಾಂಪ್

0

ಅರೋಗ್ಯ ಇಲಾಖೆ ಮತ್ತು ವಿಕಲಚೇತನರ ಇಲಾಖೆಯ ಆಶ್ರಯ ದಲ್ಲಿ ಜಂಟಿಯಾಗಿ ತಾಲೂಕಿನ ವಿಕಲಚೇತನರಿಗೆ ಹೊಸ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಜು. 23 ರಂದು ನಡೆಯಿತು.

ತಾಲೂಕು ಪಂಚಾಯತ್ ನ ವಿಕಲ ಚೇತನ ಇಲಾಖೆಯ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್ ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂ ರವರಾದ ಷಣ್ಮುಖ ಮರ್ಕಂಜ, ಕಾವೇರಿ ಗುತ್ತಿಗಾರು, ಪುಷ್ಪ ಶ್ರೀ ಬೆಳ್ಳಾರೆ, ರಂಜಿನಿ ಮುರುಳ್ಯ, ವೆಂಕಟ್ರಮಣ ಕನಕಮಜಲು ಸವಿತ ಮಂಡೆಕೋಲು, ಉಮಾವತಿ ಐವರ್ನಾಡು, ಕೃಷ್ಣಪ್ರಸಾದ್ ಬಾಳಿಲ, ಉಮ್ಮರ್ ಅಜ್ಜಾವರ ಮತ್ತು ಆರೋಗ್ಯ ಇಲಾಖೆಯ ದಾದಿ ನಯನ ಹಾಜರಿದ್ದರು.

ಆಸ್ಪತ್ರೆ ಯ ವೈದ್ಯಾಧಿಕಾರಿ ಡಾ. ಕರುಣಾಕರ್ ನೇತೃತ್ವದಲ್ಲಿ ಎಲ್ಲ ತಜ್ಞ ವೈದ್ಯರು ಹಾಜರಿದ್ದು ಸಹಕಾರ ನೀಡಿದರು.ಹಲವಾರು ಜನರು ಇದರ ಪ್ರಯೋಜನ ಪಡೆದುಕೊಂಡರು.