ದರ್ಖಾಸ್ತು ಶಶಿಕಲಾ ಎಸ್. ಶೆಟ್ಟಿಯವರಿಗೆ ಶ್ರದ್ಧಾಂಜಲಿ,ಉತ್ತರಕ್ರಿಯೆ ಕಾರ್ಯಕ್ರಮ

0

ಸುಳ್ಯ ತಾಲೂಕು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ ದರ್ಖಾಸ್ತು ಶ್ರೀಮತಿ ಶಶಿಕಲಾ ಶೆಟ್ಟಿಯವರು ಜು.10 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ಉತ್ತರಕ್ರಿಯೆ ಕಾರ್ಯಕ್ರಮವು ಜು.23 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಸುಳ್ಯ ತಾಲೂಕು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈಯವರು ಮಾತನಾಡಿ ಶಶಿಕಲಾ ಶೆಟ್ಟಿಯವರು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿಯೂ ಕೊಡುಗೆ ನೀಡಿದ್ದಾರೆ.ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಇವರು ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಹೇಳಿ ನುಡಿನಮನ ಸಲ್ಲಿಸಿದರು.


ಪ್ರದೀಪ್ ಕುಮಾರ್ ರೈ ಪನ್ನೆ ಸ್ವಾಗತಿಸಿ ದಿ.ಶಶಿಕಲಾ ಶೆಟ್ಟಿಯವರ ಆದರ್ಶ ಜೀವನದ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ಗಣ್ಯರು ದಿ.ಶಶಿಕಲಾ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ಈ ಸಂದರ್ಭದಲ್ಲಿ ಶಶಿಕಲಾ ಶೆಟ್ಟಿಯವರ ಪತಿ ದರ್ಖಾಸ್ತು ಸಂಜೀವ ಶೆಟ್ಟಿ ಪಾಂಡೇಲುಗುತ್ತು, ಪುತ್ರ ದಿನೇಶ್ ಶೆಟ್ಟಿ ,ಸೊಸೆ ರಮ್ಯಾ ಡಿ.ಶೆಟ್ಟಿ,ಪುತ್ರಿ ದೀಪಾ ಎಸ್ ಶೆಟ್ಟಿ ಅಳಿಯ ಸುಬ್ರಹ್ಮಣ್ಯ ರೈ, ಪುತ್ರಿ ದಿವ್ಯಾ ರೈ ನಂಜೆ, ಅಳಿಯ ಚಂದ್ರಶೇಖರ ರೈ ನಂಜೆ ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.