ಅರಂತೋಡು ಹಾಗೂ ತೊಡಿಕಾನದಲ್ಲಿ ಮಳೆಹಾನಿ ಪ್ರದೇಶಗಳಿಗೆ ಶಾಸಕಿ ಭಾಗೀರಥಿ ಭೇಟಿ

0

ಆರಂತೋಡು ಮತ್ತು ತೊಡಿಕಾನ ಗ್ರಾಮದಲ್ಲಿ ಮಳೆಹಾನಿ ಪ್ರದೇಶಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಆ.1ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ವಿಪರೀತ ಮಳೆಯಿಂದ ಹಾನಿಯಾದ  ತೊಡಿಕಾನ ಗ್ರಾಮದ ವ್ಯಾಪಾರೆ ದಾಮೋದರ ಗೌಡ, ಶಿವಪ್ರಸಾದ್ ಕುಂದಲ್ಪಾಡಿ, ಅಮೆಮನೆ ಉತ್ತಯ್ಯಗೌಡರ  ಮನೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯವಾವರು  ಭೇಟಿ ನೀಡಿದರು. 

ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಸತೀಶ್ ನ್ಯಾಕ್, ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಆರ್., ಹಾಗೂ ಅಲೆಟ್ಟಿ ಬಿ. ಜೆ. ಪಿ. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯ ಪ್ರಸಾದ್ ಕಾಟೂರು, ನಾರಾಯಣ ಕುಂಟುಕಾಡು ಉಪಸ್ಥಿತರಿದ್ದರು.