ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ಅಪಘಾತ

0

ರಸ್ತೆ ಬದಿ ತಡೆಬೇಲಿಗೆ ಡಿಕ್ಕಿ : ಚಾಲಕ ಅಪಾಯ ದಿಂದ ಪಾರು

ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡೆಬಲಿಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಸಂಭವವಿಸಿದೆ.

ಅರಂತೋಡು ಗ್ರಾಮದ ಚುಕ್ರಡ್ಕ ನಿವಾಸಿ ನವೀನ ರವರು ತಮ್ಮ ತಾರ್ ಜೀಪಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಪೆರಾಜೆ ಕಾಸ್ಪಡಿ ಬಳಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿ ತಡೆಬೇಲಿಗೆ ಡಿಕ್ಕಿಯಾಗಿದೆ.
ಘಟನೆಯಿಂದ ವಾಹನದ ಮುಂಭಾಗ ಅಲ್ಪ ಜಖಂ ಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ನಡೆಯಬಹುದಾದ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.