ಆದಿ ದ್ರಾವಿಡ ಯುವ ವೇದಿಕೆ.ರಿ.ದಕ್ಷಿಣ ಕನ್ನಡ ಜಿಲ್ಲೆ ತಾಲೂಕು ಸಮಿತಿ ಸ್ಥಾಪನಾ ದಿನಾಚರಣೆ

0

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸೊಳ್ಳೆ ಪರದೆ ವಿತರಣೆ

ಆದಿ ದ್ರಾವಿಡ ಯುವ ವೇದಿಕೆ ಹಾಗೂ ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಆದಿ ದ್ರಾವಿಡ ಸುಳ್ಯ ತಾಲೂಕು ಸಮಿತಿಯ ಸ್ಥಾಪನಾ ದಿನಾಚರಣೆ ಆ 4 ರಂದು ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.

ಇದರ ಅಂಗವಾಗಿ ಆಟಿ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕೊಡ ಮಾಡಿದ ಸೊಳ್ಳೆ ಪರದೆ ಮತ್ತು ಸೊಳ್ಳೆ ಬತ್ತಿಯನ್ನು ವಿತರಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಸಭಾಪತಿ ಪಿ ಬಿ ಸುಧಾಕರ್ ರೈ ಅರ್ಹ ಫಲಾನುಭವಿಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಮೋನಪ್ಪ ಮಡಿವಾಳ ಮೂಲೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಿಕೆ, ಸುಳ್ಯ ತಾಲೂಕು ಮಹಿಳಾ ಸಮಿತಿಯ ಅಧ್ಯಕ್ಷೆ ಸವಿತಾ ನಾವೂರು, ಜಿಲ್ಲಾ ಸಮಿತಿ ಗೌರವ ಸಲಹೆಗಾರರಾದ ದಾಮೋದರ ಕೊಡಿಯಾಲ, ತಾಲೂಕು ಸಮಿತಿ ಗೌರವ ಸಲಹೆಗಾರರಾದ ಪದ್ಮನಾಭ ಗೂಡು, ಹಾಗೂ ಸೌಮ್ಯ ಮಾರ್ಗ ಕಾರ್ಯಕ್ರಮದ ಸಂಘಟಕ ಸತೀಶ್ ಬಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.