ಜಯನಗರ :ವಿಕ್ರಮ ಯುವಕ ಮಂಡಲದ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ಜಯನಗರ ವಿಕ್ರಮ ಯುವಕ ಮಂಡಲ.ರಿ. ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಅ 4 ರಂದು ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ವಹಿಸಿದ್ದರು. ಕಳೆದ ಸಾಲಿನ ವರದಿ ಹಾಗೂ ಲೆಕ್ಕ ಪತ್ರವನ್ನು ಕಾರ್ಯದರ್ಶಿ ದೀಕ್ಷಿತ್ ಕುಮಾರ್ ವಾಚಿಸಿದರು.

ಬಳಿಕ ಮುಂದಿನ ಸಾಲಿನಲ್ಲಿ ಯುವಕ ಮಂಡಳ ವತಿಯಿಂದ ಆಯೋಜಿಸಲಾಗುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ಹಾಗೂ ನಿರ್ಣಯಗಳು ನಡೆಯಿತು.

ಬಳಿಕ 2024-25 ನೆ ಸಾಲಿನ ನೂತನ ಸಮಿತಿ ರಚಿಸಿ ಗೌರವ ಅಧ್ಯಕ್ಷರಾಗಿ ರಂಜಿತ್ ಕುಮಾರ್,ಅಧ್ಯಕ್ಷರಾಗಿ ಅಭಯ್,ಉಪಾಧ್ಯಕ್ಷ ಸಚಿನ್ ಕಾಮತ್,
ಕಾರ್ಯದರ್ಶಿ ವರುಣ್, ಜೊತೆ ಕಾರ್ಯದರ್ಶಿ
ಭವಿತ್,ಕೋಶಾಧಿಕಾರಿ ಅಭಿಷೇಕ್,ಕ್ರೀಡಾ ಕಾರ್ಯದರ್ಶಿ ಜೇಶ್ನು,
ಸಾಂಸ್ಕೃತಿಕ ಕಾರ್ಯದರ್ಶಿ.
ಚಿದಾನಂದ, ಸಲಹಾ ಸಮಿತಿ ಸದಸ್ಯರುಗಳಾಗಿ
ಸುದೇವ್ ಜಯನಗರ,
ಪ್ರವೀಣ್ ಕುಮಾರ್ ಎ ಎಂ, ದೀಕ್ಷಿತ್ ಕುಮಾರ್ ಕಾಮತ್,
ಅಮಿತ್ ಕುಮಾರ್,
ಸಂತೋಷ್ ಕುಮಾರ್,ಇವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಎ ಎಂ, ವಿಕ್ರಮ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುದೇವ್ ಜಯನಗರ ಉಪಸ್ಥಿತರಿದ್ದರು.

ರಂಜಿತ್ ಕುಮಾರ್ ಸ್ವಾಗತಿಸಿ, ವರುಣ್ ಕುಮಾರ್ ವಂದಿಸಿದರು.