ಬಸವೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ ಆಚರಣೆ

0

ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ ಆಚರಣೆ, ನಾಗರಪಂಚಮಿ ದಿನವಾದ ಆ.9 ರಂದು ನಡೆಯಿತು. ನಾಗದೇವರಿಗೆ ಹಾಲು, ಸಿಯಾಳಾಭಿಷೇಕ ನಡೆಯಿತು.


ದೇವಳದ ಪ್ರಧಾನ ಗಣೇಶ್ ದೀಕ್ಷಿತ್ ಪೂಜಾ ವಿಧಿವಿದಾನ ನೆರವೇರಿಸಿದರು. ದೇವಾಲಯ ಆಡಳಿತ ಮಂಡಳಿಯವರು, ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಾಲಯ ಕಾರ್ಯನಿರ್ವಾಹಣಾಧಿಕಾರಿ, ಅಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ನಾಗದೇವರಿಗೆ ಹಾಲು ಸಿಯಾಳ ಸಮರ್ಪಿಸಿದರು.