ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಎಸ್.ಎಂ ರಘು

0

ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಚಿಕ್ಕಮಗಳೂರಿನಿಂದ ವರ್ಗಾವಣೆಗೊಂಡಿರುವ ಎಸ್.ಎಂ ರಘು ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಮೈಸೂರು ನಿವಾಸಿಯಾಗಿರುವ ಎಸ್.ಎಂ ರಘುರವರು ಈ ಹಿಂದೆ ಮಡಿಕೇರಿ, ಪುತ್ತೂರು, ಹುಣಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. 1992-2006ರ ತನಕ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಗುಮಾಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದರು. ಭಡ್ತಿ ಹೊಂದಿ ಇದೀಗ ಸಹಾಯಕ ನಿಬಂಧಕರಾಗಿ ಮತ್ತೆ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.

ತ್ರಿವೇಣಿ ರಾವ್ ಚಿಕ್ಕಮಗಳೂರಿಗೆ:

ಪುತ್ತೂರಿನಲ್ಲಿ ಸಹಾಯಕ ನಿಬಂಧಕರಾಗಿದ್ದ ತ್ರಿವೇಣಿ ರಾವ್ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದಾರೆ.