ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ – 2024

0

ಸುಳ್ಯದ ನಾಡಹಬ್ಬ 53ನೇ ವರ್ಷದ ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ಅಂಗವಾಗಿ ಸುಳ್ಯ ನಗರದ ಕಾಯರ್ತೋಡಿ ಹಾಗೂ ಕಲ್ಲುಮುಟ್ಲು ವಾರ್ಡ್ ಸಮಿತಿಯನ್ನು ರಚಿಸಲಾಯಿತು.

ಕಾಯರ್ತೋಡಿ ವಾರ್ಡ್ ಸಮಿತಿ ಸಭೆಯು ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಜಯ ಶೀನಪ್ಪ , ಕಾರ್ಯದರ್ಶಿಯಾಗಿ ಶ್ವೇತ ಪ್ರಶಾಂತ್ , ಸಂಚಾಲಕರಾಗಿ ನವೀನ ಕುದ್ಪಾಜೆ ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಕಲ್ಲುಮುಟ್ಲು ವಾರ್ಡ್ ಸಮಿತಿ ಸಭೆಯು ಗಾಂಧಿನಗರದ ದೇವರಗುಂಡ ಸಂಕೀರ್ಣದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಶೇಷಪ್ಪ ಪರಿವಾರಕಾನ, ಕಾರ್ಯದರ್ಶಿಯಾಗಿ ಮಣಿಕಂಠ ಕಲ್ಲುಮುಟ್ಲು, ಸಂಚಾಲಕರಾಗಿ ಸತೀಶ್ ಪರಿವಾರಕಾನ, ಹೇಮಂತ್ ನಾರ್ಕೋಡು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.