ಕಲ್ಲಪ್ಪಳ್ಳಿ ಶಾಲಾ ಪರಿಸರದಲ್ಲಿ ಧರ್ಮಸ್ಥಳ ಯೋಜನೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಹಾಗೂ ಕಲ್ಲಪ್ಪಳ್ಳಿ ಒಕ್ಕೂಟದ ಸದಸ್ಯರಿಂದ ಆ. 11 ರಂದು ಕಲ್ಲಪಳ್ಳಿ ಶಾಲಾ ಪರಿಸರದಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಸಲಾಯಿತು.

ಒಕ್ಕೂಟದ ನಿಕಟ ಪೂರ್ವ ಸದಸ್ಯ ಜಗದೀಶ್ ಪೆರುಮುಂಡ ದೀಪ ಬೆಳಗಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶ್ರೀಮತಿ ಶೀಲಾವತಿ ಯಶೋದರ, ಶಾಲಾ ಮುಖ್ಯೋಪಾಧ್ಯಾಯ ವಿಠಲ ಅಡ್ವಾಳೆ ಉಪಸ್ಥಿತರಿದ್ದರು.
ಶಾಲೆಯ ಪಿ.ಟಿ.ಎ ಅಧ್ಯಕ್ಷ ದಾಮೋದರ ಪಿ.ಡಿ ಸ್ವಾಗತಿಸಿದರು.


ಸೇವಾ ಪ್ರತಿನಿಧಿ ಶ್ರೀಮತಿ ಕೀರ್ತಿಕಲಾ , ಒಕ್ಕೂಟದ ನಿಕಟ ಪೂರ್ವ ಸದಸ್ಯರು ಹಾಗೂ ತಂಡದ ಸದಸ್ಯರು ಗಳು ಭಾಗವಹಿಸಿದ್ದರು.