ಕೊಯನಾಡು: ಗಣಪತಿ ದೇವಾಲಯದ ಬಳಿ ರಸ್ತೆಬದಿ ಕೆಸರು

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಮಹಾಗಣಪತಿ ದೇವಾಲಯದ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ತಿರುಗಿಸುತ್ತಿರುವುದರಿಂದ ರಸ್ತೆ ಬದಿ ಕೆಸರು ತುಂಬಿ ಸಮಸ್ಯೆಯಾಗುತ್ತಿರುವುದಾಗಿ ಸಾರ್ವಜನಿಕರು ಹೇಳಿಕೊಂಡಿದ್ದಾರೆ.

ಸುಳ್ಯದಿಂದ ಕೊಯನಾಡಿಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರು ಕೊಯನಾಡು ಪೇಟೆಯ ಬಳಿ ಹೋಗದೇ , ಗಣಪತಿ ದೇವಾಲಯದ ಬಳಿಯೇ ಬಸ್ ತಿರುಗಿಸುತ್ತಿದ್ದು, ರಸ್ತೆ ಬದಿ ಕೆಸರು ತುಂಬಿರುವ ಕಾರಣದಿಂದ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆಗೊಳಗಾಗಿದ್ದಾರೆ.