ಕಲ್ಲುಗುಂಡಿ B.M.S ಘಟಕದ ಮಾಸಿಕ ಸಭೆ , ರಕ್ಷಾಬಂಧನ ಹಾಗೂ ಕೆನರಾ ಬ್ಯಾಂಕ್ ಯೂನಿಯನ್ ಮಾಹಿತಿ ಕಾರ್ಯಕ್ರಮ

0

ಆಟೋ ಚಾಲಕರ ಸಂಘ ಕಲ್ಲುಗುಂಡಿ B.M.S ಘಟಕದ ಮಾಸಿಕ ಸಭೆ ಮತ್ತು ರಕ್ಷಾಬಂದನ ಕಾರ್ಯಕ್ರಮ ಹಾಗೂ ಕೆನರಾ ಬ್ಯಾಂಕ್ ಯೂನಿಯನ್ ಬ್ಯಾಂಕ್ ಮಾಹಿತಿ ಕಾರ್ಯಕ್ರಮ ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ಒತ್ತೆಕೋಲ ಗದ್ದೆ ಹಾಲ್ ನಲ್ಲಿ (ಆ 21 ) ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕಲ್ಲುಗುಂಡಿ ಬಿ.ಎಂ .ಎಸ್ ಘಟಕದ ಅಧ್ಯಕ್ಷರು ಕೇಶವ ಬಂಗ್ಲೆಗುಡ್ಡೆ ವಹಿಸಿದರು.

ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಸಿಗುವ ಜನಸುರಕ್ಷಾ ಅಭಿಯಾನ, ಪ್ರದಾನಮಂತ್ರಿ ಜೀವನ್ ಜ್ಯೋತಿ, ಬೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ, ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ, ಹಾಗೂ ಇನ್ನಿತರ ಹಲವು ಯೋಜನೆಗಳು ಮತ್ತು‌ ಬ್ಯಾಂಕಿಂಗ್ ಬಗ್ಗೆ ಆಟೋ ಚಾಲಕರಿಗೆ ಕೆನರಾ ಬ್ಯಾಂಕ್ ವತಿಯಿಂದ ಶ್ರೀಮತಿ ಸುಜಾತ ಆರ್ಥಿಕ ಸಾಕ್ಷರತಾ ಕೇಂದ್ರ ಆಮೂಲ್ಯ ಸುಳ್ಯ ಮತ್ತು ಯೂನಿಯನ್‌ ಬ್ಯಾಂಕ್ ಆಪ್ತ ಸಮಲೋಚಕಿ ಪ್ರಿಯಾ ಅವರು ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ ಕೆನರಾ ಬ್ಯಾಂಕ್ ಯೂನಿಯನ್ ಬ್ಯಾಂಕ್ ವತಿಯಿಂದ ವಿಮೆ ನೋಂದಾವಣಿ ಮಾಡಲಾಯಿತು.

ಇದೇ ವೇಳೆ ಕಲ್ಲುಗುಂಡಿ B.M.S ಘಟಕದ ವತಿಯಿಂದ ರಕ್ಷಾಬಂದನವನ್ನು ಆಚರಿಸಿ
ಬಳಿಕ ಸಭೆಯಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ಸದಸ್ಯರು ಹಾಗೂ ನಮ್ಮ B.M.S ಸಂಘದ‌ ಸದಸ್ಯರಾದ ಚಿದಾನಂದ ಮೂಡನಕಜೆ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ
ವಸಂತ ಎನ್.ಟಿ , ಉಪಾಧ್ಯಕ್ಷ ಜಗದೀಶ್ ಗೂನಡ್ಕ, ಕಾರ್ಯದರ್ಶಿ ಪ್ರಮೋದ್ ಕೈಪಡ್ಕ, ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಸಂಘದ ನಿರ್ದೇಕರುಗಳು ಮತ್ತು ಸಂಘದ ಎಲ್ಲಾ ಸದಸ್ಯರುಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರವಿಕುಮಾರ್ ನಿಡಿಂಜಿ ಸ್ವಾಗತಿಸಿ, ವಂದಿಸಿದರು.