ಬಾಳಿಲ ಅಂಗನವಾಡಿ ಸಹಾಯಕಿಗೆ ಸೀಮಂತ ಕಾರ್ಯಕ್ರಮ

0

ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಮತ್ತು ಅಂಗನವಾಡಿ ಪೋಷಕರಿಂದ
ಬಾಳಿಲ ಅಂಗನವಾಡಿ ಸಹಾಯಕಿ ಶ್ರೀಮತಿ ಚೈತ್ರಾ ಕೆ.ಸಿಯವರಿಗೆ ಸೀಮಂತ ಕಾರ್ಯಕ್ರಮ ಆ. 21ರಂದು ನಡೆಸಲಾಯಿತು.


ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷರಾದ ಪುಷ್ಪಾವತಿ, ಪದಾಧಿಕಾರಿಗಳು, ಸದಸ್ಯರು, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶಶಿಕಲಾ ಪೋಷಕರು ಹಾಗು ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.


ಅಂಗನವಾಡಿ ಶಿಕ್ಷಕಿ ದಯಾನಂದಿನಿ ಸ್ವಾಗತಿಸಿ, ವಂದಿಸಿದರು.
ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.