ಸುಳ್ಯ ಗಣೇಶೋತ್ಸವದ ಪೂರ್ವಭಾವಿ ಸಭೆ

0

ಸುಳ್ಯ ಸಿದ್ಧಿವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ಸೆ.7 ರಿಂದ 11 ರ ತನಕ ನಡೆಯಲಿರುವ 56 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವ ಭಾವಿ ಸಭೆಯು ಕಲ್ಕುಡ ದೈವಸ್ಥಾನದಲ್ಲಿ ಆ‌.27 ರಂದು ನಡೆಯಿತು.

ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಚರ್ಚಿಸಲಾಯಿತು. ವಿವಿಧ ಜವಾಬ್ದಾರಿಯನ್ನು ಸಮಿತಿ ಸದಸ್ಯರಿಗೆ ಹಂಚಿಕೊಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಗೋಪಾಲಕೃಷ್ಣ ಕೆ.ಎಸ್, ದಾಮೋದರ ಮಂಚಿ, ಭರತ್ ಪಿ.ಯು, ಶಶಿಧರ ಎಂ.ಜೆ, ಬೆಳ್ಯಪ್ಪ ಗೌಡ, ಗುರುದತ್ ಶೇಟ್, ಕಿಶೋರಿ ಶೇಟ್, ಜನಾರ್ದನ ದೋಳ, ವಿಶ್ವನಾಥ ಕುಂಚಡ್ಕ, ಸುಪ್ರೀತ್ ಮೋಂಟಡ್ಕ, ಶೀನಪ್ಪಬಯಂಬು,ಶಿವರಾಮ ಕೇರ್ಪಳ, ಸುಧಾಕರ ಕೇರ್ಪಳ, ನಾರಾಯಣ ಶಾಂತಿನಗರ, ಮಿಥುನ್ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.