ಪಂಜದ ದಯಾಪ್ರಸಾದ್ ಚೀಮುಳ್ಳು ಅವರಿಗೆ ಸೇವಾಚಕ್ರ ಪುರಸ್ಕಾರ್ ಪ್ರಶಸ್ತಿ ಪ್ರದಾನ

0

ಪಂಬೆತ್ತಾಡಿ ಗ್ರಾಮದ ಪಂಜದ ವನಸಿರಿ ಫಾರ್ಮ್ಸ್ ಮತ್ತು ಸಾನಿಕ ನರ್ಸರಿ ಮಾಲಕ ಕೃಷಿಕರಾದ ದಯಾಪ್ರಸಾದ್ ಚೀಮುಳ್ಳು ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ ಸೇವಾ ಚಕ್ರ ಪುರಸ್ಕಾರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ, ಬೆಂಗಳೂರು ನಗರ ಜಿಲ್ಲೆ ಹಾಗೂ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಸಂಸ್ಥೆ (ಸ್ವಾನ್) ಸ್ವರ್ಣಮುಖಿ ಮಾಸಪತ್ರಿಕೆ, ಇಂದು ಸಂಜೆ ದಿನ ಪತ್ರಿಕೆ ವಿ . ನಾಗರಾಜು ಪ್ರತಿಷ್ಠಾನ, ಎಸ್.ಬಿ. ನ್ಯೂಸ್ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ವೀರಯೋಧರಿಗೆ ನಮನ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡಭವನದಲ್ಲಿ ಆ.22ರಂದು ನಡೆಯಿತು.

ದಯಾಪ್ರಸಾದ್ ಚೀಮುಳ್ಳು ಅವರು ದೇಶ ವಿದೇಶದ ವಿವಿಧ ಹಣ್ಣಿನ ತಳಿಗಳನ್ನು ಬೆಳೆಸಿ, ಮಾಹಿತಿ ನೀಡುತ್ತಿದ್ದು, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ದಯಾಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.