ಸುಳ್ಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಧ್ಯಾನ ಕೇಂದ್ರದಲ್ಲಿಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಸುಳ್ಯದ ಅಂಬಟೆಡ್ಕದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಬಾಲಕೃಷ್ಣನ ತೊಟ್ಟಿಲ ತೂಗ ಬನ್ನಿರಿ ಕಾರ್ಯಕ್ರಮವು ಸೆ.27 ರಿಂದ ಆರಂಭಗೊಂಡು ಸೆ. 29 ರ ತನಕ ನಡೆಯಲಿದೆ.


ಸೆ.27 ರಂದು ಆರಂಭಗೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ಭಜನಾ ಮಂಡಳಿಯ ಸದಸ್ಯರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಭಜನಾ ಸಂಕೀರ್ತನೆಯು ನಡೆಯಿತು.


ಎರಡನೇಯ ದಿನದಂದು ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ವಂದನಾ ರವರು ಸಂದೇಶ ನೀಡಿದರು.


ಮುಖ್ಯ ಅಭ್ಯಾಗತರಾಗಿ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕೂಜುಗೋಡು, ಅಮರಮುಡ್ನೂರು ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಶ್ರೀ ಕೃಷ್ಣ ಪರಮಾತ್ಮನಿಗೆ ಆರತಿ ಬೆಳಗಿ ತೊಟ್ಟಿಲು ತೂಗುವ ಮೂಲಕ ಶುಭ ಹಾರೈಸಿದರು.

ಆಗಮಿಸಿದ ಎಲ್ಲರಿಗೂ ಬಾಲಕೃಷ್ಣನಿಗೆ ಮಂಗಳಾರತಿ ಬೆಳಗಿ ತೊಟ್ಟಿಲು ತೂಗುವ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ಧ್ಯಾನ ಕೇಂದ್ರದ ಬ್ರಹ್ಮಕುಮಾರೀಸ್ ಉಮಾ ರವರು ಸ್ವಾಗತಿಸಿದರು.
ಉಮೇಶ್ ಜಟ್ಟಿಪಳ್ಳ ರವರು ಕಾರ್ಯಕ್ರಮ ನಿರ್ವಹಿಸಿದರು. ಧ್ಯಾನ ಕೇಂದ್ರದ ಸ್ವಯಂ ಸೇವಕರು ಸಹಕರಿಸಿದರು.