ಕಾಂತಮಂಗಲ ಸೇತುವೆಯಿಂದ ನೀರಿಗೆ ಬಿದ್ದ ಯುವಕ ಅಜ್ಜಾವರದ ಅಡ್ಕ ನಿವಾಸಿ..!

0

ಕಾಂತಮಂಗಲ ಸೇತುವೆಯಿಂದ ಕೆಳಗೆ ನೀರಿಗೆ ಬಿದ್ದಿರುವ ಯುವಕ ಅಜ್ಜಾವರ ಅಡ್ಪಂಗಾಯ – ಅಡ್ಕ ನಿವಾಸಿಯೆಂದು ಹೇಳಲಾಗುತ್ತಿದೆ.

ಮಾನಸಿಕ ಅಸ್ವಸ್ಥನೆಂದು ಆತ ಕಾಂತಮಂಗಲ ಸೇತುವೆಯಲ್ಲಿ ನಿಂತಿದ್ದನೆಂದು, ಬೈಕಲ್ಲಿ ಬಂದ ಆತನ ಪರಿಯಸ್ಥರೊಬ್ಬರು ಆತನಲ್ಲಿ ಮಾತನಾಡಲೆತ್ನಿಸಿದಾಗ ಆತ ಏಕಾಏಕಿ ಸೇತುವೆಯಿಂದ ಕೆಳಗೆ ಜಿಗಿದನೆಂದು ತಿಳಿದುಬಂದಿದೆ.

ನೀತಿಗೆ ಬಿದ್ದ ಆತ 50 ಮೀಟರ್ ದೂರ ಈಜುತ್ತಿದ್ದಂತೆ ಕಂಡಿತೆಂದು ಮತ್ತೆ ಆತನ ತಲೆ ಕಾಣಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಅಗ್ನಿಶಾಮಕ ದಳದವರು, ಪೋಲೀಸರು ಸ್ಥಳಕ್ಕೆ ಬಂದು ಹುಡುಕಾಟ ಆರಂಭಿಸಿದ್ದಾರೆ. ‌ಜನರು ಜಮಾಯಿಸಿದ್ದಾರೆ.

ಆತನಿಗೆ ಚೆನ್ನಾಗಿ ಈಜಲು ಬರುತ್ತದೆ ಎಂದು ಆತ ಇನ್ನೊಂದು ಕಡೆಯಿಂದ ಮೇಲೆ ಹತ್ತಿರಬಹುದೆಂದು‌ಕೆಲವರು ಹೇಳುತ್ತಾರೆ.