ಶಿಕ್ಷಕ ದಿನಾಚರಣೆಯ ಅಂಗವಾಗಿ ನಾಳೆ ನಿವೃತ್ತ ಶಿಕ್ಷಕ-ಸಾಹಿತಿಗಳಿಗೆ ಕ.ಸಾ.ಪ.ವತಿಯಿಂದ ಗೌರವಾರ್ಪಣೆ

0

    ಸೆ.5 ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಶಿಕ್ಷಕ -ಸಾಹಿತಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ.

ಕಳೆದ ವರ್ಷದಿಂದ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ -ಸಾಹಿತಿಗಳ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸುವ ಸಂಪ್ರದಾಯವನ್ನು ಆರಂಭಿಸಿದೆ.ಕಳೆದ ವರ್ಷ ಹಿರಿಯ ಕವಿ-ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀಶ ಚೊಕ್ಕಾಡಿಯವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಲಾಗಿತ್ತು.ಈ ವರ್ಷ ಶಿಕ್ಷಕರ ದಿನಾಚರಣೆಯಾದ ನಾಳೆ ಹಿರಿಯ ಮಹಿಳಾ ಸಾಹಿತಿಗಳಾದ ಶ್ರೀಮತಿ ಜಯಮ್ಮ ಚೆಟ್ಟಿಮಾಡ ಹಾಗೂ ಶ್ರೀಮತಿ ಶೀಲಾವತಿ ಕೊಳಂಬೆಯವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸುವುದೆಂದು ನಿರ್ಧರಿಸಲಾಗಿದೆ.


ನಾಳೆ ಬೆಳಗ್ಗೆ 7.45ಕ್ಕೆ ಸುಳ್ಯದ ಜಯಮ್ಮ ಚೆಟ್ಟಿಮಾಡರ ನಿವಾಸ ಹಾಗೂ 8.15ಕ್ಕೆ ಚೊಕ್ಕಾಡಿಯ ಶ್ರೀಮತಿ ಶೀಲಾವತಿ ಕೊಳಂಬೆಯವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಲಾಗುತ್ತದೆ.
ಸುಳ್ಯ ತಾಲೂಕು ಕನ್ನಡ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.