ಬಡ್ಡಡ್ಕದಲ್ಲಿ ಗಣೇಶ ಚತುರ್ಥಿ ಆಚರಣೆ

0

ಅಮರ ಕ್ರೀಡಾ ಮತ್ತು ಕಲಾ ಸಂಘ ಬಡ್ಡಡ್ಕ ಹಾಗೂ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಬಡ್ಡಡ್ಕ- ಕಲ್ಲಪಳ್ಳಿ ಇದರ ಜಂಟಿ ಆಶ್ರಯದಲ್ಲಿ 17 ನೇ ವರ್ಷದ ಗಣೇಶ ಚತುರ್ಥಿ ಕಾರ್ಯಕ್ರಮವು ಸೆ. 07 ದಂದು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಬೆಳಗ್ಗೆ ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯಾಯಿತು.

ಗಣೇಶ ಚತುರ್ಥಿ ಯ ಪ್ರಯುಕ್ತ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ನೀಡಲಾಯಿತು. ಅಮರ ಕ್ರೀಡಾ ಮತ್ತು ಕಲಾ ಸಂಘ ದ ಅಧ್ಯಕ್ಷ ಕಮಲಾಕ್ಷ ಬಡ್ಡಡ್ಕಅಧ್ಯಕ್ಷತೆ ವಹಿಸಿದ್ದರು.


ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸಮಿತಿಯ ಕೋಶಾಧಿಕಾರಿ ನಂದಕುಮಾರ್ ಬಾಟೋಳಿ, ಗುರುಸ್ವಾಮಿ ಜಿ. ಜನಾರ್ಧನ ಗುರುಸ್ವಾಮಿ ಗುಂಡ್ಯ, ಪಂ.ಕಾರ್ಯದರ್ಶಿ ವಿದ್ಯಾದರ ಕುಡೆಕಲ್ಲು, ನಿಕಟ ಪೂರ್ವ ಅಧ್ಯಕ್ಷ ವೆಂಕಟ್ರಮಣ ದೋಣಿಮೂಲೆ, ಭಜನಾ ಮಂದಿರ ಸಮಿತಿಯ ಸದಸ್ಯರಾದ ನಿತ್ಯಾನಂದ ಗುಂಡ್ಯ, ಜಯಪ್ರಕಾಶ್ ಪೆರುಮುಂಡ ಉಪಸ್ಥಿತರಿದ್ದರು.


ಸನತ್ ಕುಮಾರ್ ಚಳ್ಳಂಗಾರ್ ಕಾರ್ಯಕ್ರಮ ನಿರೂಪಿಸಿದರು.