ಡಾ.ಆರ್.ಕೆ.ನಾಯರ್‌ರವರಿಗೆ ಮಂಗಳೂರು ಕೆಎನ್‌ಎಸ್‌ಎಸ್ ಸನ್ಮಾನ

0


ಗ್ರೀನ್ ಹೀರೋ ಆಫ್ ಇಂಡಿಯಾ, ಪರಿಸರ ತಜ್ಞ ಡಾ. ಆರ್.ಕೆ. ನಾಯರ್ ಅವರನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಮಂಗಳೂರು ಕರಯೋಗಂ ಓಣಂ ಆಚರಣೆಯ ವೇಳೆ ಸನ್ಮಾನಿಸಿ ಅಬಿನಂದಿಸಲಾಯಿತು.


ಕೆಎನ್‌ಎಸ್‌ಎಸ್ ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ಹೊಸಮಜಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎನ್‌ಎಸ್‌ಎಸ್ ಬೋರ್ಡ್ ಚೆಯರ್‌ಮೆನ್ ರಾಮಚಂದ್ರ ಪಲೇರಿ, ಯೂನಿಯನ್ ಬ್ಯಾಕ್ ಝೋನಲ್ ಹೆಡ್ ಶ್ರೀಮತಿ ರೇಣು ಕೆ. ವಿನೋದ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ಅಧ್ಯಕ್ಷ ಸತೀಶ್‌ಕುಮಾರ್ ಕುಂಪಲ, ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಕೇರಳ ಸಮಾಜದ ಅಧ್ಯಕ್ಷ ಪಿ.ಕೆ.ರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.