ಎಡಮಂಗಲ ಪ್ರೌಢಶಾಲೆಯಲ್ಲಿ ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ

0

ಎಡಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ಸೆ. 12 ರಂದು ನಡೆಯಿತು.
ಸುಳ್ಯ ಶಾಸಕಿ ಕು ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ಅಧ್ಯಕ್ಷತೆ ವಹಿಸಿದ್ದರು.


ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ ಪರ್ಲ, ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಎಣ್ಮೂರು ಪ್ರೌಢಶಾಲಾ ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್, ಬಿ.ಆರ್.ಪಿ. ಸುಬ್ರಹ್ಮಣ್ಯ, ಈ.ಸಿ.ಓ. ಶ್ರೀಮತಿ ಸಂಧ್ಯಾ, ಎಣ್ಮೂರು ಸಿಆರ್ ಪಿ ಜಯಂತ ಕೆ., ಈ ಸಿ ಓ ಧನಲಕ್ಷ್ಮಿ ಸುಳ್ಯ ಬಿ ಆರ್ ಪಿ ಸುಂದರ, ಗ್ರಾಪಂ ಸದಸ್ಯ ಮಾಧವ ಡೆಮ್ಮಾಯಿಲ, ಸ್ಥಳದಾನಿಗಳಾದ ಸುಂದರಿ ಕಾಯರ್ತಿ ಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದಿ.ಬಾಲಕೃಷ್ಣ ರೈ ರವರ ಸ್ಮರಣಾರ್ಥವಾಗಿ ಅವರ ಪತ್ನಿ ಶ್ರೀಮತಿ ಕಲಾವತಿ ಮತ್ತು ಮನೆಯವರು ನೂತನವಾಗಿ ನಿರ್ಮಿಸಿ ಕೊಡುಗೆಯಾಗಿ ನೀಡಿದ ರಂಗ ಮಂದಿರವನ್ನು ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮಯ್ಯ ನೂಚಿಲ ರವರು ಈ ಸಂದರ್ಭದಲ್ಲಿ ಉದ್ಘಾಟಿಸಿದರು.


ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಸ್ವಾಗತಿಸಿದರು. ಈ ಸಿ ಓ ಸಂಧ್ಯಾ ಪ್ರಸ್ತಾವನೆಗೈದು, ಶಿಕ್ಷಕ ಸಂತೋಷ್ ವಂದಿಸಿದರು. ಶಿಕ್ಷಕ ಆನಂದ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕಲ್ಲೆಂಬಿ ತಂಡ ಸಹಕರಿಸಿದರು.