ಸೆ.16 : ಬೆಳ್ಳಾರೆಯಲ್ಲಿ ಶ್ರೀ ಬಾಲಾಜಿ ಫ್ಯಾಶನ್ ಶುಭಾರಂಭ

0

ಬೆಳ್ಳಾರೆ ಮುಖ್ಯ ರಸ್ತೆ ಕಲ್ಪವೃಕ್ಷ ಆರ್ಕೇಡ್ ನಲ್ಲಿ ದಿನೇಶ್ ಹಾಗೂ ಸುಖಾರಾಮ್ ಪಟೇಲ್ ರವರ ಮಾಲಕತ್ವದ ಶ್ರೀ ಬಾಲಾಜಿ ಫ್ಯಾಶನ್ ಸೆ.16 ರಂದು ಶುಭಾರಂಭಗೊಳ್ಳಲಿದೆ.


ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ ನ ಸಂಚಾಲಕ ಎಂ.ಪಿ.ಉಮೇಶ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.


ಶಾಸಕಿ ಭಾಗೀರಥಿ ಮುರುಳ್ಯ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಉದ್ಯಮಿ ಮಾಧವ ಗೌಡ ಎಂ.,ಬೆಳ್ಳಾರೆ ಲಕ್ಷ್ಮೀವೆಂಕಟೆಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಶ್ಯಾನುಭೋಗ್,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ,ಝಕಾರಿಯಾ ಜುಮ್ಮಾ ಮಸೀದಿ ಗುರುಗಳಾದ ಮೊಹಮ್ಮದ್ ನಸೀಹಾ ದಾರಿಮಿ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.