ಸುಳ್ಯ ಬಿಜೆಪಿ ಮಂಡಲ ಒಬಿಸಿ ಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರಮೋದಿ ಜನ್ಮದಿನಾಚರಣೆ , ವಿಶ್ವ ಕರ್ಮ ಜಯಂತಿ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ

0

ಬಿಜೆಪಿ ಸುಳ್ಯ ಮಂಡಲದ ಒಬಿಸಿ ಮೋರ್ಚಾದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 74 ನೇಜನ್ಮದಿನಾಚರಣೆ ,ವಿಶ್ವಕರ್ಮ ಜಯಂತಿ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ ಸುಳ್ಯದ ಬಿಜೆಪಿ ಕಚೇರಿಯಲ್ಲಿ ಸೆ. 17 ರಂದು ನಡೆಯಿತು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಪ್ರಧಾನಿ ಮೋದಿಜೀ ಯವರ ಜೀವನ , ನಡೆದು ಬಂದ ಹಾದಿ , ದೇಶಕ್ಕೋಸ್ಕರ ಮಾಡಿದ ಅಭಿವೃದ್ಧಿಗಳ ಬಗ್ಗೆ ಮತ್ತು ವಿಶ್ವ ಕರ್ಮ ಜಯಂತಿ ಆಚರಣೆ ಬಗ್ಗೆ ಮಾತನಾಡಿದರು.

ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾಹಿತಿ ಕಾರ್ಯಾಗಾರ ಇದರ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಅಧ್ಯಕ್ಷ ಗಿರೀಶ್ ಆಚಾರ್ಯ , ಒಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ಕಿಶೋರ್ ಕುಮಾರ್ , ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಸೂಂತೋಡು ,ಚಂದ್ರಾವತಿ ಸುಣ್ಣಾಜೆ ಸವಣೂರು, ಸರೋಜಿನಿ ಆಚಾರ್ಯ, ರಾಕೇಶ್ ಮೆಟ್ಟಿನಡ್ಕ, ಚಂದ್ರಶೇಖರ್ ತೊಡಿಕಾನ , ಚಂದ್ರ ಶೇಖರ ನೆಡಿಲು ಮೊದಲಾವರು ಉಪಸ್ಥಿತರಿದ್ದರು.

ಬಿಜೆಪಿ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಶೋಕ್ ಅಡ್ಕಾರ್ ಸ್ವಾಗತಿಸಿ , ಸದಾನಂದ ಆಚಾರ್ಯ ವಂದಿಸಿದರು.