ಬೆಳ್ಳಾರೆ – ತಡಗಜೆ ರಸ್ತೆ ಕಾಂಕ್ರೀಟೀಕರಣ : ಶೀಘ್ರದಲ್ಲಿ ರಸ್ತೆ ಉದ್ಘಾಟನೆ

0

ಬೆಳ್ಳಾರೆ ಮುಖ್ಯ ಪೇಟೆ ಬಸ್ ನಿಲ್ದಾಣ ಸಮೀಪದಿಂದ ತಡಗಜೆ ಹೋಗುವ ರಸ್ತೆ ಕಾಂಕ್ರೀಟೀಕರಣಗೊಂಡಿದೆ.
ಹಲವು ವರ್ಷಗಳಿಂದ ಈ ರಸ್ತೆ ತೀರಾ ಹದಗೆಟ್ಟಿದ್ದು ಈ ಬಾರಿ ಕಾಂಕ್ರೀಟೀಕರಣಗೊಂಡು ಇನ್ನು ಕೆಲವೇ ದಿನದಲ್ಲಿ ರಸ್ತೆ ಉದ್ಘಾಟನೆಗೊಳ್ಳಲಿದೆ.


ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯರವರು ರೂ.16ಲಕ್ಷ ಅನುದಾನ ದೊರಕಿಸಿಕೊಟ್ಟು ಕಾಂಕ್ರೀಟೀಕರಣ ನಡೆದಿದೆ. ಮುಖ್ಯ ರಸ್ತೆಯಿಂದ ತಡಗಜೆ ರಸ್ತೆ ಸುಮಾರು 230 ಮೀಟರ್ ಉದ್ದ ಕಾಂಕ್ರೀಟೀಕರಣಗೊಂಡಿದೆ.