ಅರಂಬೂರು: ಕೃಷಿ ತೋಟಕ್ಕೆ ಕಾಡಾನೆ ದಾಳಿ ಕೃಷಿ ನಾಶ

0

ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಪರಿಶೀಲನೆ

ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸಿ, ಕೃಷಿ ನಾಶಗೊಂಡ ಘಟನೆ ಸೆ.19ರಂದು ರಾತ್ರಿ ಅರಂಬೂರಿನ ಪರಿವಾರಕಾನದಲ್ಲಿ ಸಂಭವಿಸಿದೆ.

ಅಜ್ಜಾವರ ಹಾಗೂ ತುದಿಯಡ್ಕ ಪರಿಸರದಲ್ಲಿದ್ದ ಸುಮಾರು ಏಳು ಕಾಡಾನೆಗಳ ಹಿಂಡು ಸೆ.19ರಂದು ರಾತ್ರಿ ಪಯಸ್ವಿನಿ ಹೊಳೆ ದಾಟಿ ಅರಂಬೂರಿನ ಪರಿವಾರಕಾನದ ಬಳಿ ರಾಷ್ಟ್ರೀಯ ಹೆದ್ದಾರಿ ದಾಟಿ ಪರಿವಾರಕಾನದ ನಾರಾಯಣ ನಾಯ್ಕ ಅವರ ತೋಟದಲ್ಲಿ ಅಡಿಕೆ, ತೆಂಗು, ಬಾಳೆ ಕೃಷಿ ಹಾಗೂ ಪಕ್ಕದ ಅಜೀಜ್ ಅವರ ತೋಟದಲ್ಲಿ ಬಾಳೆ ಕೃಷಿ ನಾಶಪಡಿಸಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆಗಳ ಹಿಂಡು ಪೂಮಲೆ ಕಾಡಿನತ್ತ ತೆರಳಿರುವುದಾಗಿ ತಿಳಿದುಬಂದಿದೆ.