ಬ್ರಹ್ಮರಗಯ ಅಯ್ಯಪ್ಪ ಗುಡಿಯ ಹುಂಡಿ ಹಣ ಕಳವು

0

ಸುಳ್ಯ ಕೊಡಿಯಾಲಬೈಲು – ಹೊಸಗದ್ದೆಯ ಬ್ತಹ್ಮರಗುಡಿ ಅಯ್ಯಪ್ಪ ಗುಡಿಯ ಕಾಣಿಕೆ ಡಬ್ಬಿಗಳನ್ನು ಒಡೆದು ಹಣ ಕದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಳ್ಳರ ಕೃತ್ಯ ಇಂದು ಬೆಳಿಗ್ಗೆ ಗಮನಕ್ಕೆ ಬಂತು.


ಮೂರು ಕಾಣಿಕೆ ಡಬ್ಬಿಗಳನ್ನೂ ಒಡೆದು ಹಣ ಕದಿಯಲಾಗಿದೆ. ಸುಮಾರು ಐದಾರು ಸಾವಿರ ರೂ. ಇದ್ದಿರಬಹುದೆಂದು ಅಯ್ಯಪ್ಪ ಗುಡಿಯ ಕಾರ್ಯದರ್ಶಿ ಪ್ರವೀಣ್ ಜಯನಗರ ತಿಳಿಸಿದ್ದಾರೆ. ಎಸ್.ಐ. ಸಂತೋಷ್, ನ.ಪಂ.ಸದಸ್ಯೆ ಶಿಲ್ಪ ಸುದೇವ್, ಕಮಿಟಿಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.